ರಾಗಿ ಹಣ ಪಾವತಿಗಾಗಿ ಆಗ್ರಹಿಸಿ ರೈತರ ಅಹೋರಾತ್ರಿ ಧರಣಿ

ರಾಗಿ ಹಣ ಪಾವತಿಗಾಗಿ ಆಗ್ರಹಿಸಿ ರೈತರ ಅಹೋರಾತ್ರಿ ಧರಣಿ

ರಾಗಿ ಹಣ ಪಾವತಿಗಾಗಿ ಆಗ್ರಹಿಸಿ ರೈತರ ಅಹೋರಾತ್ರಿ ಧರಣಿ - Janathavani

ಜಗಳೂರು, ಜ.19- ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಗಿ ಹಣ ಪಾವತಿಗಾಗಿ ಒತ್ತಾಯಿಸಿ, ಫಲಾನುಭವಿ ರೈತರು ಸ್ಥಳದಲ್ಲಿಯೇ ಸೌದೆ ಒಲೆಯಲ್ಲಿ ಅಡುಗೆ ತಯಾರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತ ಸಂಘಟನೆ ಮುಖಂಡ ಆಕನೂರು ನಿಂಗಪ್ಪ ಮಾತನಾಡಿ, ಕಳೆದ ವರ್ಷದಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ನಡೆದ ಅವ್ಯವಹಾರದಿಂದ ಹಣ ಪಾವತಿಯಿಂದ ವಂಚಿತರಾಗಿ ರುವ ರಾಗಿ ಬೆಳೆಗಾರರಿಗೆ ಹಂತ ಹಂತವಾಗಿ ಹಣ ಪಾವತಿಸಲು ಸರ್ಕಾರ ಕ್ರಮಕೈಗೊಳ್ಳಲಾಗಿತ್ತು. ಆಹಾರ‌ ನಿಗಮದ ಅಧಿಕಾರಿಗಳು  ನೋಟಿಸ್‌ಗೆ ಸ್ಪಂದಿಸಿ, ತಾಂತ್ರಿಕ ದೋಷ ಸರಿಪಡಿಸಿ, ವಾರದೊಳಗೆ ಹಣ ಪಾವತಿಸಲು ಒಪ್ಪಿಕೊಂಡಿದ್ದರು. ಆದರೆ, ಇದುವ ರೆಗೂ 500 ಕ್ಕೂ ಅಧಿಕ ರೈತರಿಗೆ ಯಾವುದೇ ಬಿಡಿಗಾಸು ಹಣ ಪಾವತಿಯಾಗಿಲ್ಲ ಎಂದರು.

ರೈತ ಸಂಘಟನೆ ಮುಖಂಡ ಮಾರುತಿ ಮಾತನಾಡಿ, ತಾಲ್ಲೂಕು ಪ್ರಸಕ್ತ ಸಾಲಿನಲ್ಲಿ ಬರ ಛಾಯೆಗೆ ಸಿಲುಕಿ ಯಾವುದೇ ಬೆಳೆಗಳು ಕೈಗೆ ಸಿಗದೇ ಕಂಗಾಲಾಗಿರುವ ರೈತರಿಗೆ ಕಳೆದ ವರ್ಷದ ರಾಗಿ ಹಣವೂ ಇಲ್ಲದೇ ಗಾಯದ ಮೇಲೆ ಬರೆ ಎಳೆದಂತಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಹಣ ಪಾವತಿ ಮಾಡುವವರೆಗೂ ಅನಿರ್ದಿಷ್ಠಾವಧಿ ಸ್ಥಳದಲ್ಲಿಯೇ ಅಡುಗೆ ತಯಾರಿಸಿಕೊಂಡು ಊಟ, ತಿಂಡಿ ಸೇವಿಸುವ ಮೂಲಕ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ರೈತರ ಪ್ರತಿಭಟನೆ ಕುರಿತು ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ‌ ನಿರ್ದೇಶಕರ ಗಮನಕ್ಕೆ ತರಲಾಗಿದ್ದು, ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿ ಸಲು ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ  ಪ್ರತಿಕ್ರಿಯೆ ನೀಡಿದರು.

ಈ ಸಂದರ್ಭದಲ್ಲಿ ರಾಗಿ ಬೆಳೆಗಾರರಾದ ಮಂಜಣ್ಣ, ಸಿದ್ದಪ್ಪ, ಮಾದಿಹಳ್ಳಿ ಪರಮೇಶ್ವರಪ್ಪ, ಶರಣಪ್ಪ, ಮರಿಕುಂಟೆ ಮಹೇಶ್, ಬಾಬು, ಉರ್ಲುಕಟ್ಟೆ ರೇವಣ್ಣ, ರಸ್ತೆ ಮಾಚಿಕೆರೆ ಸ್ವಾಮಿ, ಅಜ್ಜಣ್ಣ ಮುಂತಾದವರು ಇದ್ದರು.

error: Content is protected !!