12ರ ವರೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ

12ರ ವರೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ

ಪಟ್ಟಿಯಲ್ಲಿ ಲೋಪವಾಗದಂತೆ ಎಚ್ಚರವಹಿಸಲು ಮತದಾರರ ಪಟ್ಟಿ ವೀಕ್ಷಕರಾದ ಗುಂಜನ್ ಕೃಷ್ಣ ಸೂಚನೆ

ದಾವಣಗೆರೆ, ಜ. 5 – ಚುನಾವಣಾ ಆಯೋಗವು ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆಗೆ ಜ. 12ರ ವರೆಗೆ ಅವಕಾಶ ಕಲ್ಪಿಸಿದ್ದು ತಿದ್ದುಪಡಿ, ಸೇರ್ಪಡೆ, ಮರಣ ಹೊಂದಿದ ಮತದಾರರನ್ನು ಕೈಬಿಡಬಹುದಾಗಿ ದ್ದು, ಪರಿಷ್ಕರಣೆಯ ವೇಳೆ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ, ದಾವ ಣಗೆರೆ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರಾದ ಶ್ರೀಮತಿ ಗುಂಜನ್ ಕೃಷ್ಣ ಸೂಚನೆ ನೀಡಿದರು. 

 ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾ ಧಿಕಾರಿ, ತಹಶೀಲ್ದಾರರು, ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ಚುನಾವಣಾ ಆಯೋಗ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ್ದು, ಈ ಅವಧಿಯಲ್ಲಿ ಹೆಚ್ಚು ಹೆಚ್ಚು ಯುವ ಮತದಾರರನ್ನು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು. ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ ಮಾಡುವಾಗ ಸ್ವಯಂ ಪ್ರೇರಿತರಾಗಿ ಯಾವುದೇ ದಾಖಲೀಕರಣ ಮಾಡದೇ ದಾಖಲೆಗಳನ್ನಿಟ್ಟು ಕೊಂಡು ಸೇರ್ಪಡೆ, ತಿದ್ದುಪಡಿ ಮತ್ತು ಮರಣ ಹೊಂದಿದ ಮತದಾರರನ್ನು ಕೈಬಿಡುವ ಕೆಲಸ ಮಾಡಬೇ ಕೆಂದರು. ಮತದಾರರ ಪಟ್ಟಿ ವೀಕ್ಷಕರ ಲಾಗಿನ್‍ಗೆ ಸಲ್ಲಿಕೆ ಯಾದ ನಮೂನೆ 6,7,8 ರಡಿ ಸಲ್ಲಿಸಿದ ಅರ್ಜಿಗಳಲ್ಲಿ 208 ಅರ್ಜಿಗಳನ್ನು ಅಧಿಕಾರಿ ಗಳ ಹಾಗೂ ರಾಜಕೀಯ ಪಕ್ಷ ಗಳ ಮುಖಂಡರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದರು. 

 ಒಟ್ಟು ಜಿಲ್ಲೆಯಲ್ಲಿ ಜ. 4ರ ವರೆಗೆ 727204 ಪುರುಷ, 731251 ಮಹಿಳೆ ಯರು, 120 ಇತರೆ, 454 ಸೇವಾ ಮತ ದಾರರು ಸೇರಿ 1459029 ಮತದಾರರಿ ದ್ದಾರೆ. ಕ್ಷೇತ್ರವಾರು ಮತದಾರರಲ್ಲಿ ಜಗಳೂರು 195558, ಹರಿಹರ 209919, ದಾವಣಗೆರೆ ಉತ್ತರ 246105, ದಕ್ಷಿಣ 215230, ಮಾಯಕೊಂಡ 193070, ಚನ್ನಗಿರಿ 200750, ಹೊನ್ನಾಳಿ 198397 ಮತದಾರರಿದ್ದಾರೆ. 

 ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಶ್ರೀ, ಪಾಲಿಕೆ ಆಯುಕ್ತೆ ರೇಣುಕಾ, ತಹಶೀಲ್ದಾರ್ ಅಶ್ವತ್ಥ್ ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

error: Content is protected !!