ರೈತರ ಪಂಪ್‌ಸೆಟ್‌ಗಳಿಗೆ ಪ್ರತಿದಿನ 5 ಗಂಟೆ ವಿದ್ಯುತ್ ಸರಬರಾಜು

ರೈತರ ಪಂಪ್‌ಸೆಟ್‌ಗಳಿಗೆ  ಪ್ರತಿದಿನ  5 ಗಂಟೆ  ವಿದ್ಯುತ್ ಸರಬರಾಜು

ದಾವಣಗೆರೆ, ಅ.27- ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಎಸ್ ಮಲ್ಲಿಕಾರ್ಜುನ್ ಮತ್ತು  ಶಾಸಕರು ಹಾಗೂ ರೈತ ಸಂಘಟನೆಗಳೊಂದಿಗೆ ಸಮಾಲೋಚನೆ ಮಾಡಿ ರೈತರ  ಕೃಷಿ ಚಟುವಟಿಕೆಗಳಿಗಾಗಿ  ದಿನದಲ್ಲಿ 5 ಗಂಟೆಗಳ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದು ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಬಿ.ಎಸ್ ಜಗದೀಶ್ ತಿಳಿಸಿದ್ದಾರೆ. 

ಐದು ಗಂಟೆಯಲ್ಲಿ ಹಗಲು ವೇಳೆ 3 ಗಂಟೆ ಮತ್ತು ರಾತ್ರಿ ವೇಳೆ 2 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 361 ಕೃಷಿ ಪಂಪ್‍ಸೆಟ್ ಮಾರ್ಗಗಳಿರುತ್ತವೆ.

error: Content is protected !!