ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮಲೇಬೆನ್ನೂರು ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾಜಿ ಇಂದು ರಾತ್ರಿ 11.30ರ ವೇಳೆಗೆ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಮಂಜುಳಾ ಅವರಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು. ಅವರ ಪಾರ್ಥಿವ ಶರೀರವನ್ನು ನಾಳೆ ದಿನಾಂಕ 15ರ ಬುಧವಾರ ಮುಂಜಾನೆ 6 ರಿಂದ 9 ರವರೆಗೆ ಸ್ಥಳೀಯ ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್ನಲ್ಲಿರುವ ಶಿವಧ್ಯಾನ ಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೀಡಲಾಗುವುದು. ಅಲ್ಲಿಂದ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಮಲೇಬೆನ್ನೂರಿನ ಬ್ರಹ್ಮಾಕುಮಾರೀಸ್ ಸಂಸ್ಥೆಯಲ್ಲಿಡಲಾಗುವುದು. ನಂತರ ಮಧ್ಯಾಹ್ನ 2 ಗಂಟೆಗೆ ಮಲೇಬೆನ್ನೂರಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಜುಳಾಜಿ, ದಾವಣಗೆರೆಯ ಕೆನರಾ ಬ್ಯಾಂಕಿನ ನಿವೃತ್ತ ಪಿಗ್ಮಿ ಸಂಗ್ರಹಕಾರರಾಗಿದ್ದ ದಿ|| ಜಿ.ಎಸ್. ಶಿವಾನಂದ ಮತ್ತು ಶ್ರೀಮತಿ ಚಿತ್ರಮ್ಮ ದಂಪತಿಯ ಆರು ಜನ ಪುತ್ರಿಯರಲ್ಲಿ ನಾಲ್ಕನೇಯವರು. ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿಯೇ ಅಧ್ಯಾತ್ಮದತ್ತ ಆಕರ್ಷಿತರಾಗಿದ್ದ ಮಂಜುಳಾಜಿ, ಬ್ರಹ್ಮಾಕುಮಾರೀಸ್ ಸಂಸ್ಥೆಯ ವಿದ್ಯಾರ್ಥಿಯಾಗಿ, ರಾಜಯೋಗ ಶಿಕ್ಷಕಿಯಾಗಿ, ಮಲೇಬೆನ್ನೂರು ಶಾಖೆ ಸಂಚಾಲಕರಾಗಿ ಕಳೆದ ಸುಮಾರು 29 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಬ್ರಹ್ಮಾಕುಮಾರಿ ಮಂಜುಳಾಜಿ
![manjulaji ಬ್ರಹ್ಮಾಕುಮಾರಿ ಮಂಜುಳಾಜಿ](https://janathavani.com/wp-content/uploads/2024/05/manjulaji-.jpg)