ದಾವಣಗೆರೆ ಎಸ್.ಎಸ್. ಬಡಾವಣೆ `ಎ’ ಬ್ಲಾಕ್, ಗ್ಲಾಸ್ ಹೌಸ್ ರಸ್ತೆ 1ನೇ ಕ್ರಾಸ್ ವಾಸಿ ಕಕ್ಕರಗೊಳ್ಳದ ಶ್ರೀ ಕೋಡೇರ ರೇವಣಸಿದ್ದಪ್ಪನವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮನವರು ದಿನಾಂಕ 04.10.2023ರ ಬುಧವಾರ
ಮಧ್ಯಾಹ್ನ 1.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 75 ವರ್ಷ ವಯಸ್ಸಾಗಿತ್ತು. ಪತಿ, ಪುತ್ರ – ಕೆ.ಆರ್. ವೇದಮೂರ್ತಿ (ಸಿದ್ದೇಶ್), ಮೂವರು ಪುತ್ರಿಯರು, ಸಹೋದರ – ಮಾಜಿ ಛೇರ್ಮನ್
ಜಿ.ಹೆಚ್. ರಾಮಚಂದ್ರಪ್ಪ ಸೇರಿದಂತೆ, ಇಬ್ಬರು ಸಹೋದರರು, ಓರ್ವ ಸಹೋದರಿ ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಮತ್ತು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 05.10.2023ರ ಗುರುವಾರ ಬೆಳಿಗ್ಗೆ 11.30ಕ್ಕೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀಮತಿ ಪಾರ್ವತಮ್ಮ
![parvathamma ಶ್ರೀಮತಿ ಪಾರ್ವತಮ್ಮ](https://janathavani.com/wp-content/uploads/2023/10/parvathamma.jpg)