ಸಿರಿಗೆರೆ ತರಳಬಾಳು ಬೃಹನ್ಮಠದ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಟಿ. ಮಹೇಶ್ವರಪ್ಪ ಅವರು ದಿನಾಂಕ 25-09-2023ರ ಸೋಮವಾರ ಸಂಜೆ 6 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 74 ವರ್ಷ ವಯಸ್ಸಾಗಿತ್ತು. ಕೇದಾರನಾಥ ದರ್ಶನ ಪಡೆದು, ಗುಪ್ತಕಾಶಿಗೆ ಆಗಮಿಸಿದ ಸಂದರ್ಭದಲ್ಲಿ ನಿಧನರಾದ ಶ್ರೀಯುತರ ಪಾರ್ಥಿವ ಶರೀರವನ್ನು ದಿನಾಂಕ 27-09-2023ರ ಬುಧವಾರ ಮಧ್ಯಾಹ್ನ ದಾವಣಗೆರೆಗೆ ತರಲಾಗುತ್ತದೆ. ನಂತರ, ಮಧ್ಯಾಹ್ನ 4 ಗಂಟೆಯಿಂದ ತರಳಬಾಳು ಬಡಾವಣೆ 12ನೇ ತಿರುವಿನಲ್ಲಿರುವ ಮೃತರ ಸ್ವಗೃಹದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗುವುದು. ದಿನಾಂಕ 28-09-2023ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಮೃತರ ಸ್ವಗ್ರಾಮ ತರೀಕೆರೆ ತಾಲ್ಲೂಕಿನ ಕುಡ್ಲೂರು ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
August 28, 2024