ದೊಡ್ಡಐಗಳ ಮಠದ ವಂಶಸ್ಥರಾದ ಲಿಂ. ಶ್ರೀಮತಿ ಗೌರಮ್ಮ ಮತ್ತು ಲಿಂ. ಶ್ರೀ ನಂಜಪ್ಪಯ್ಯನವರ ಪುತ್ರರಾದ, ದಾವಣಗೆರೆ ತಾಲ್ಲೂಕು ಕಾಶೀಪುರ ಗ್ರಾಮದ ವಾಸಿ ಕೆ.ಎಂ. ರುದ್ರಯ್ಯ ಇವರು ದಿನಾಂಕ 22.08.2023ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಶಿವೈಕ್ಯರಾಗಿದ್ದಾರೆ. ಮೃತರು ಪತ್ನಿ ನೀಲಮ್ಮ ಹಾಗೂ ಓರ್ವ ಪುತ್ರಿ, ಮೂವರು ಪುತ್ರರು ಸೇರಿದಂತೆ ದೊಡ್ಡಐಗಳ ಮಠದ ವಂಶಸ್ಥರು, ಕಾಶೀಪುರ ಗ್ರಾಮಸ್ಥರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 23.08.2023ರ ಬೆಳಿಗ್ಗೆ 10.30ರ ಸುಮಾರಿಗೆ ಮೃತರ ಸ್ವಗ್ರಾಮವಾದ ಕಾಶೀಪುರದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಕೆ.ಎಂ. ರುದ್ರಯ್ಯ
![rudrayya ಕೆ.ಎಂ. ರುದ್ರಯ್ಯ](https://janathavani.com/wp-content/uploads/2023/08/rudrayya.jpg)