ಆರನೇಕಲ್ಲು ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಆರನೇಕಲ್ಲು ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ದಾವಣಗೆರೆ, ಅ. 4 – ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರನೇಕಲ್ಲು (ತರಳಬಾಳು ನಗರ) ಗ್ರಾಮದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದ ಅಲೆಮಾರಿಗಳ ಜನಾಂಗದವರಿಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಕ್ಕುಪತ್ರ ವಿತರಿಸಿದರು.

ಅಲೆಮಾರಿ ಜನಾಂಗದವರು ಹಲವು ವರ್ಷಗಳಿಂದ ಆರನೇಕಲ್ಲು (ತರಳಬಾಳು ನಗರ) ಗ್ರಾಮದ ಖಾಸಗಿ ಜಮೀನಿನಲ್ಲಿ ನೆಲೆಸಿದ್ದು, ಹಕ್ಕುಪತ್ರಕ್ಕಾಗಿ ಶಾಸಕರ ಬಳಿ ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಶಾಸಕರು ಖಾಸಗಿ ಜಮೀನಿನ ಮಾಲೀಕರೊಂದಿಗೆ ಮಾತುಕತೆ ನಡೆಸಿ ಹಕ್ಕುಪತ್ರ ನೀಡಲು ವ್ಯವಸ್ಥೆ ಮಾಡಿದ್ದು, ಇಂದು ಅಧಿಕೃತವಾಗಿ ಹಕ್ಕುಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜಿ.ಸಿ.ನಿಂಗಪ್ಪ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹದಡಿ ಹಾಲಪ್ಪ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಮಂಜಣ್ಣ, ಆರ್.ಎನ್.ಹನುಮಂತಪ್ಪ, ನಿಟುವಳ್ಳಿ ಮಂಜಣ್ಣ, ಆರ್.ಎಸ್.ಹೇಮಣ್ಣ, ಶಿರಮಗೊಂಡನಹಳ್ಳಿ ರುದ್ರೇಶ್, ತುರ್ಚಘಟ್ಟ ರಿಯಾಜ್, ಇರ್ಫಾನ್, ಹದಡಿ ಪಿಡಿಓ ಜಗದೀಶ್ ಮತ್ತಿತರರಿದ್ದರು.

error: Content is protected !!