ಸ್ವಾತಂತ್ರ್ಯ ಯೋಧರ ‘ಪುತ್ಥಳಿ’ ಪಕ್ಕ ಶೌಚಾಲಯ ವಿರುದ್ಧ ಪ್ರತಿಭಟನೆ

ಸ್ವಾತಂತ್ರ್ಯ ಯೋಧರ  ‘ಪುತ್ಥಳಿ’ ಪಕ್ಕ ಶೌಚಾಲಯ ವಿರುದ್ಧ ಪ್ರತಿಭಟನೆ

ರಾಣೇಬೆನ್ನೂರು, ಫೆ.1- ನಗರದ ಮಿನಿ ವಿಧಾನಸೌಧದ ಮುಂದೆ ಸ್ಥಾಪಿಸಿರುವ ಸ್ವಾತಂತ್ರ್ಯ ಸೇನಾನಿ, ಹುತಾತ್ಮ ಮೆಣಸಿನಹಾಳ ತಿಮ್ಮನಗೌಡ ‘ಪುತ್ಥಳಿ’ಯ ಪಕ್ಕದಲ್ಲಿ   ಸಾರ್ವಜನಿಕ ಶೌಚಾಲಯ  ನಿರ್ಮಿಸುತ್ತಿರುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಕಟ್ಟಿರುವ ಶೌಚಾಲಯವನ್ನು ಸಾರ್ವಜನಿಕರೊಂದಿಗೆ ಸೇರಿ ನೆಲಸಮ ಮಾಡುತ್ತೇವೆಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ನಗರಸಭೆಯವರಿಗೆ ಎಚ್ಚರಿಕೆ ನೀಡಿದರು. 

ಒಟ್ಟಿನಲ್ಲಿ ಜಾಗ ಯಾವುದಾದರೇನು? ಕಾಮಗಾರಿ ಯಾವುದಾದರೇನು? ಕಳಪೆ ಕಾಮಗಾರಿ ಮಾಡಿ ಹಗಲು ದರೋಡೆ ಮಾಡುವ ಉದ್ದೇಶ ಇದಾಗಿದೆ. ‘ಹುಚ್ಚು ಮುಂಡೆ ಲಗ್ನದಲ್ಲಿ ಉಂಡವನೇ ಜಾಣ’ ಎನ್ನುವಂತಾಗಿದೆ. ತಹಶೀಲ್ದಾರರು ಕೂಡಲೇ ಅವರಿಗೆ ತಿಳಿ ಹೇಳಿ ಸ್ಥಳ ಬದಲಾಯಿಸಬೇಕು  ಎಂದು ಒತ್ತಾಯಿಸಿದರು.  

ಪ್ರತಿಭಟನೆಯಲ್ಲಿ ಜಗದೀಶ ಕೆರೂಡಿ, ಬಸಣ್ಣ ನೆಲಗಲ್ಲ, ಇಕ್ಬಾಲ್ ಸಾಬ್ ರಾಣೇಬೆನ್ನೂರು, ಆರ್.ಎಲ್. ಗೌಡ್ರ, ರವಿ ಮಲ್ಲಳ್ಳಿ, ಬಸವರಾಜ ಕೊಂಗಿಯವರ, ಶಂಭು ನರಸಗೊಂಡರ, ರಾಜು ಓಲೇಕಾರ, ಕೇಶಪ್ಪ ಹದಡಿ ಮುಂತಾದವರು ಭಾಗವಹಿಸಿದ್ದರು.

error: Content is protected !!