ಬೂತ್ ಅಧ್ಯಕ್ಷರ ಮನೆಗೆ `ಬಿಜೆಪಿಯೇ ಭರವಸೆ’ ಸ್ಟಿಕ್ಕರ್ ಅಂಟಿಸಿದ ರಾಜ್ಯಾಧ್ಯಕ್ಷ

ಬೂತ್ ಅಧ್ಯಕ್ಷರ ಮನೆಗೆ `ಬಿಜೆಪಿಯೇ ಭರವಸೆ’ ಸ್ಟಿಕ್ಕರ್ ಅಂಟಿಸಿದ ರಾಜ್ಯಾಧ್ಯಕ್ಷ

ದಾವಣಗೆರೆ, ಜ. 26 – ಬಿಜೆಪಿ ವತಿಯಿಂದ ನಡೆಸಲಾಗುತ್ತಿರುವ ಬೂತ್ ವಿಜಯ ಅಭಿಯಾನದ ಅಂಗವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನಗರದ ಆರ್.ಎಂ.ಸಿ. ರಸ್ತೆಯ 19ನೇ ವಾರ್ಡ್‌ಗೆ ಭೇಟಿ ನೀಡಿದರು.

19ನೇ ವಾರ್ಡ್‌ ನ 138ನೇ ಬೂತ್ ಅಧ್ಯಕ್ಷ ಪಿ. ಅನಿಲ್ ಕುಮಾರ್ ಅವರ ಮನೆಗೆ `ಬಿಜೆಪಿಯೇ ಭರವಸೆ’ ಎಂಬ ಸ್ಟಿಕರ್ ಹಾಗೂ ಗೋಡೆ ಬರಹ ಅಂಟಿಸಿದರು. ಇದೇ ವೇಳೆ ವಾರ್ಡ್‌ನ ಹಲವಾರು ಮನೆಗಳಿಗೆ ಭೇಟಿ ನೀಡಿ ಬಿಜೆಪಿ ಪರ ಅಭಿಯಾನ ನಡೆಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಭಿಯಾನಕ್ಕೆ ನಿರೀಕ್ಷೆಗೂ ಮೀರಿ ಬೆಂಬಲ ದೊರೆತಿದೆ. ನಾಳೆ ಬಿಜೆಪಿ ಕೇಂದ್ರ ನಾಯಕ ಹಾಗೂ ಸಚಿವ ಅಮಿತ್ ಷಾ ಅವರು ಕುಂದಗೋಳ ಹಾಗೂ ಬೆಳಗಾವಿಯಲ್ಲಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು  ಹೇಳಿದರು.

ಈ ಸಂದರ್ಭದಲ್ಲಿ ಪರಿಷತ್ ಸದಸ್ಯ ಕೆ.ಎಸ್. ನವೀನ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಹನಗವಾಡಿ ವೀರೇಶ್, ಉಪ ಮೇಯರ್ ಗಾಯತ್ರಿಬಾಯಿ ಖಂಡೋಜಿ ರಾವ್, ಮುಖಂಡರಾದ ಬಿ.ಎಸ್. ಜಗದೀಶ್, ಪ್ರಸನ್ನ ಕುಮಾರ್, ಯಶವಂತರಾವ್ ಜಾಧವ್, ಭಾಗ್ಯ ಪಿಸಾಳೆ, ಆರ್.ಎಲ್. ಶಿವಕುಮಾರ್, ಎಸ್.ಟಿ. ವೀರೇಶ್, ಸೋಗಿ ಶಾಂತಕುಮಾರ್, ಜಿ.ಎಸ್. ಶಾಮ್, ದೇವರಮನೆ ಶಿವಕುಮಾರ್, ಬಿ.ಜಿ ಅಜಯ್ ಕುಮಾರ್, ಬಿ.ಜಿ. ಸಂಗನಗೌಡ್ರು,  ಶ್ರೀನಿವಾಸ ದಾಸಕರಿಯಪ್ಪ, ಬಿ.ಎಂ. ಸತೀಶ್, ಆರ್. ಪ್ರತಾಪ್, ಸುಧಾ ಜಯರುದ್ರೇಶ್, ಬಿ.ಟಿ. ಸಿದ್ದಪ್ಪ, ಟಿಂಕರ್ ಮಂಜಣ್ಣ, ಆನಂದಪ್ಪ ಮತ್ತಿತರರು ಉಪಸ್ಥಿತರಿದ್ದ

error: Content is protected !!