ಬಿಜೆಪಿ ಯುವ ಮೋರ್ಚಾದಿಂದ ಭಗತ್‌ಸಿಂಗ್ ಪುತ್ಥಳಿಗೆ ಪುಷ್ಪಾರ್ಚನೆ

ದಾವಣಗೆರೆ, ಸೆ.28- ಸ್ವತಂತ್ರ ಹೋರಾಟಗಾರ ಭಗತ್‌ಸಿಂಗ್ ಅವರ ಜನ್ಮ ದಿನದಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ರೈಲು ನಿಲ್ದಾಣ ಮುಂಭಾಗದಲ್ಲಿರುವ ಭಗತ್‌ಸಿಂಗ್‌ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಯಿತು‌.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರೂ ಆದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್.ಶಿವಪ್ರಕಾಶ್, ಯುವ ಮುಖಂಡರುಗಳಾದ ಗೌತಮ್ ಜೈನ್, ಶಂಕರಗೌಡ ಬಿರಾದಾರ್, ಗಿರೀಶ್, ಸಚಿನ್ ವೆರ್ಣೇಕರ್, ಹರೀಶ್, ರಾಕೇಶ್ ಜಾಧವ್, ಪ್ರದೀಪ್, ಕಿರಣ್, ವಿನಯ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!