ಪೌರ ಕಾರ್ಮಿಕರಿಗೆ ಪಾದ ಪೂಜೆ ಸಲ್ಲಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಲೋಕಿಕೆರೆ ನಾಗರಾಜ್

ದಾವಣಗೆರೆ,ಆ.30-  ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಅವರು ತಮ್ಮ ಹುಟ್ಟುಹಬ್ಬವನ್ನು ನಗರ ಸ್ವಚ್ಛತೆಯಲ್ಲಿ ಅತ್ಯಮೂಲ್ಯ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರಿಗೆ ಪಾದ ಪೂಜೆ ಸಲ್ಲಿಸುವುದರ ಮೂಲಕ ಆಚರಿಸಿಕೊಂಡರು. 

ಲೋಕಿಕೆರೆ ನಾಗರಾಜ್ ಮತ್ತು ಶ್ರೀಮತಿ ಲತಾ ದಂಪತಿ ಹಾಗೂ ಕುಟುಂಬ ವರ್ಗದವರು ತಮ್ಮ ನಿವಾಸದಲ್ಲಿ ಪೌರ ಕಾರ್ಮಿಕರನ್ನು ಪೂಜಿಸುವುದರೊಂದಿಗೆ ಅಭಿನಂದಿಸಿದರು. ನಾಗರಾಜ್ ಅವರ ತಂದೆ ಹನುಮಂತಪ್ಪ ಕರೇಗೌಡ್ರ, ಬಾಡಾದ ಆನಂದರಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!