ಮುಂಬೈ ದಾಳಿಯ ಹುತಾತ್ಮ ಯೋಧರಿಗೆ ನಮನ

ದಾವಣಗೆರೆ, ನ.27- ನಗರದ ಹೊಂಡದ ವೃತ್ತದಲ್ಲಿಂದು ಸಂಜೆ ಜಿಲ್ಲಾ ಬಿಜೆಪಿ ದಕ್ಷಿಣ ಯುವ ಮೋರ್ಚಾ ವತಿಯಿಂದ ಮುಂಬೈ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಭಾರತೀಯ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನಮನ ಸಲ್ಲಿಸಿ ತ್ಯಾಗ-ಬಲಿದಾನವನ್ನು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಭಜ ರಂಗಿ, ಮಂಡಲ ಪ್ರಧಾನ ಕಾರ್ಯದರ್ಶಿ ರಾಜು ನೀಲಗುಂದ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಿರಣ್, ಗಣೇಶ್, ಕಾರ್ಯದರ್ಶಿ ಪ್ರದೀಪ್,   ಉಪಾಧ್ಯಕ್ಷ ಅನಿಲ್, ಅಭಿಷೇಕ್, ಸದಸ್ಯರಾದ ಸಂತೋಷ್, ಚೇತನ್, ಯುವ ಮುಖಂಡರಾದ ಪ್ರವೀಣ್ ಜಾಧವ್, ಮಂಜು, ಗುರು ಸೋಗಿ, ನವೀನ್ ಕುಮಾರ್, ಮಹಾಂತೇಶ, ವಿರುಪಣ್ಣ, ಮಂಡಲ ಉಪಾಧ್ಯಕ್ಷ ಕಿಶೋರ್,  ಕಾರ್ಯದರ್ಶಿ ಬಾಲರಾಜ್, ಟಿಂಕರ್ ಮಂಜಣ್ಣ ಮತ್ತು ದೇಶ ಪ್ರೇಮಿಗಳು ಭಾಗವಹಿಸಿದ್ದರು.

error: Content is protected !!