ಸೇನೆಯಿಂದ ನಿವೃತ್ತಿ : ಪ್ರಭು ಹನುಮಂತಪ್ಪ ಕರಡೆಪ್ಪನವರ್‌ಗೆ ಸನ್ಮಾನ

ಹರಿಹರ, ಜೂ.24- ಕೋಡಿ ಯಾಲ ಹೊಸಪೇಟೆ ಗ್ರಾಮದ ಪ್ರಭು ಹನುಮಂತಪ್ಪ ಕರಡೆಪ್ಪನವರ್ ದೇಶದ ಸೇನೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ್ದು, ರಾಣೇಬೆನ್ನೂರು ಶಾಸಕ ಅರುಣ್‌ಕುಮಾರ್ ಪೂಜಾರ್ ಮತ್ತು ಜಿ.ಪಂ. ಸದಸ್ಯೆ ಮಂಗಳಗೌರಿ ಅವರು ಸ್ವಾಗತಿಸಿ, ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪುಷ್ಪಾವತಿ ಕುಂಬಾರ, ಉಪಾಧ್ಯಕ್ಷ ದಿನೇಶ್ ಬಾಬು, ನೀಲಮ್ಮ, ಕರೆಡಪ್ಪನವರ್, ಜಯಪ್ಪ ಕರೆಡಪ್ಪನವರ್, ಪ್ರವೀಣ್ ಚೋಳಪ್ಪ ರಾಣೇಬೆನ್ನೂರು, ಕೊಟ್ರೇಶಪ್ಪ, ಎಂ.ಎಂ.ಪಿ. ನಾಗರಾಜ್ ಉಪಸ್ಥಿತರಿದ್ದರು.

ಗ್ರಾ.ಪಂ. ಸದಸ್ಯ ಎಂ.ಹೆಚ್.ಪಿ. ಬಸವರಾಜ್, ಕೆ.ಕೆ. ಮಂಜುನಾಥ್, ಎಂ.ಡಿ. ಬಸವರಾಜಪ್ಪ, ಹನುಮಂತಪ್ಪ, ಅನೂಪ್ ಪೂಜಾರ್, ಪ್ರಭು, ಚೆನ್ನಿಗಪ್ಪ, ಪೂಜಾರ್ ವಂಶಸ್ಥರು, ಗ್ರಾ.ಪಂ. ಸದಸ್ಯರು ಇನ್ನಿತರರಿದ್ದರು.

error: Content is protected !!