ವಿಠಲಪುರದ ರುದ್ರಪ್ಪಗೆ ಬಿದರಿ ಶ್ರದ್ಧಾಂಜಲಿ

ದಾವಣಗೆರೆ, ಜು.24- ಇತ್ತೀಚೆಗೆ ನಿಧನರಾದ ಎಪಿಎಂಸಿ ವರ್ತಕ ವಿಠಲಾಪುರದ ರುದ್ರಪ್ಪ ಅವರ ಕೈಲಾಸ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರು ಪಾಲ್ಗೊಂಡು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ದಿ.ರುದ್ರಪ್ಪ ಅವರ ಧರ್ಮಪತ್ನಿ ಶ್ರೀಮತಿ ಕಮಲಾಕ್ಷಿ, ಪುತ್ರ ಕಿರಣ್ ಹಾಗೂ ಕುಟುಂಬ ವರ್ಗ ಉಪಸ್ಥಿತರಿದ್ದರು.

error: Content is protected !!