ವಜ್ರೇಶ್ವರಿ ಮಹಿಳಾ ಸಂಸ್ಥೆಯಿಂದ ಡಾ. ಬಿ.ಆರ್.ಅಂಬೇಡ್ಕರ್‍ ಜಯಂತಿ

ದಾವಣಗೆರೆ, ಏ.18 – ವಜ್ರೇಶ್ವರಿ ಮಹಿಳಾ ಸಂಸ್ಥೆಯಿಂದ ಡಾ. ಬಿ.ಆರ್‍. ಅಂಬೇಡ್ಕರ್‍ ಜಯಂತಿಯನ್ನು ಹಿರೇ ಹಾಲಿವಾಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಕಲಿಕಾ ಪರಿಕರಗಳನ್ನು ಕೊಡುವುದರ ಮೂಲಕ ಆಚರಿಸಿದರು.

ಶಾಲಾ ಮುಖ್ಯ ಶಿಕ್ಷಕ ಎಸ್‍.ಹೆಚ್‍. ಹೂಗಾರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ವಿಜಯ ಸಿ. ಅಕ್ಕಿ ವಹಿಸಿದ್ದರು, ಸಂಸ್ಥೆಯ ನಿರ್ದೇಶಕರುಗಳಾದ ಗೀತಾ, ಚಂದ್ರಿಕ, ಮಂಗಳಾ, ಜ್ಯೋತಿ ಡಿ. ಜ್ಯೋತಿ ಹೆಚ್‌.ಎಸ್‌, ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸಹನ ನಿರೂಪಿಸಿದರು. ಸಂಸ್ಥೆಯ ಗೀತಾ ಮತ್ತು ತಂಡದವರು ಪ್ರಾರ್ಥಿಸಿದರು.

error: Content is protected !!