ವೀರಶೈವ ಮಹಾಸಭಾ ಅಧ್ಯಕ್ಷರಾಗಿ ನಾಗರಾಜಗೌಡ

ಕೂಡ್ಲಿಗಿ, ಫೆ.8 – ಅಖಿಲ ಭಾರತ ವೀರಶೈವ ಮಹಾಸಭಾ ಕೂಡ್ಲಿಗಿ ತಾಲ್ಲೂಕು ನೂತನ ಅಧ್ಯಕ್ಷರಾಗಿ ಪಟ್ಟಣದ ಟಿ.ಜಿ.ನಾಗರಾಜ್‍ ಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಪಟ್ಟಣದ ಅಶ್ವಮೇಧ ರೆಸಿಡೆನ್ಸಿಯಲ್ಲಿ ಸೋಮವಾರ ಕೂಡ್ಲಿಗಿ ತಾಲ್ಲೂಕಿನ ವೀರಶೈವ ಮುಖಂಡರು ನೂತನ ಅಧ್ಯಕ್ಷರಿಗೆ ಸ್ವಾಗತ ಕೋರಿದರು. 

ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳಾಗಿ  ಖಾನಾವಳಿ ಕೊಟ್ರೇಶಪ್ಪ, ನಂದೀಶ, ಜಿ.ರೇವಣಸಿದ್ದಪ್ಪ,  ಪೂಜಾರಿ ಈರಣ್ಣ,  ಅಜ್ಜಪ್ಪಗೌಡ,  ಸಂತೋಷ್ ಪಾಟೀಲ್, ಸೋಮಣ್ಣ,
ಯರಿಸ್ವಾಮಿ, ಮೂಗಣ್ಣ,  ವೀರೇಶ್, ಎಂ.ಮರುಳಸಿದ್ದಪ್ಪ, ಬಿ.ಸುವರ್ಣ,  ಗೌರಮ್ಮ,  ಜಿ.ಪರಿಮಳಾ,  ಟಿ.ಜಿ.ವೀಣಾ, ಜಿ.ಪೂರ್ಣಿಮಾ,  ಜಿ.ವಿಶ್ವನಾಥ,  ಸಂದೀಪ್ ಪಾಟೀಲ್,  ಸುನೀಲ್ ಪಾಟೀಲ್ ಅವರ ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ಟಿ.ಜಿ.ನಾಗರಾಜಗೌಡ ಅವರು ತಿಳಿಸಿದರು. ಕೂಡ್ಲಿಗಿ ತಾಲ್ಲೂಕಿನ ವೀರಶೈವ ಸಮಾಜದ ಮುಖಂಡರು ಹಾಜರಿದ್ದರು. 

error: Content is protected !!