ಕಾಂಕ್ರೀಟ್ ರಸ್ತೆಗೆ ಶಾಸಕರ ಚಾಲನೆ

ರಾಣೇಬೆನ್ನೂರು, ಫೆ.6-  ತಾಲ್ಲೂಕಿನ ಬಸಲೀಕಟ್ಟಿ, ಪದ್ಮಾವತಿಪುರ ತಾಂಡಾ, ನಂದಿಹಳ್ಳಿ ಹಾಗೂ ಬೇಲೂರು ಗ್ರಾಮಗಳ ಪರಿಶಿಷ್ಟ ಜಾತಿಯವರ ಓಣಿಗಳಿಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿ ದರು. ನಂತರ ಮಾತನಾಡಿದ ಶಾಸಕರು ಗ್ರಾಮಗಳ ಅಭಿವೃದ್ಧಿ ಕಾಮಗಾರಿ ಗಳಿಗೆ ಜನರು ಸಹಕಾರ ನೀಡುವಂತೆ ಮನವಿ ಮಾಡಿದರು. ಒಂದು ಕೋ ಟಿಗೂ ಅಧಿಕ ವೆಚ್ಚದ ಈ ಕಾಮಗಾರಿಯನ್ನು ಗುಣಮಟ್ಟ ಮತ್ತು ನಿಗದಿತ ಅವಧಿಯೊಳಗೆ ಪೂರೈಸುವಂತೆ ಗುತ್ತಿಗೆದಾರರಿಗೆ  ಕಟ್ಟಪ್ಪಣೆ ಮಾಡಿದರು.

ತಾ.ಪಂ. ಅಧ್ಯಕ್ಷೆ ಗೀತಾ ಲಮಾಣಿ, ಗ್ರಾ.ಪಂ. ಅಧ್ಯಕ್ಷ ಪರಮೇಶ ಲಮಾಣಿ ಹಾಗೂ ಸದಸ್ಯರು, ನಗರಸಭೆ ಸದಸ್ಯ ಪ್ರಕಾಶ ಪೂಜಾರ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಆರ್. ಮಂಜುನಾಥ, ರಾಜು ಹರಮಗಟ್ಟಿ, ಚೇತನಕುಮಾರ, ಗುತ್ತಿಗೆದಾರ ಸಂತೋಷ ಮುಡದ್ಯಾವಣ್ಣನವರ  ಇನ್ನಿತರರಿದ್ದರು.

error: Content is protected !!