ಮಡಿವಾಳ ಮಾಚಿದೇವ ಜಯಂತಿ

ಮಲೇಬೆನ್ನೂರು, ಫೆ. 4 – ಇಲ್ಲಿನ ಪುರಸಭೆ ಯಲ್ಲಿ ತುಳಿತಕ್ಕೆ ಒಳಗಾಗಿದ್ದವರ ಒಳಿತಿಗಾಗಿ ಶ್ರಮಿಸಿದ ಶಿವಶರಣ ಮಡಿವಾಳ ಮಾಚಿದೇವ ಜಯಂತಿಯನ್ನು ಆಚರಿಸಲಾಯಿತು. ಪುರಸಭೆ ಅಧ್ಯಕ್ಷರಾದ ನಾಹೀದಾ ಅಂಜುಂ ಸೈಯದ್ ಇಸ್ರಾರ್, ಉಪಾಧ್ಯಕ್ಷರಾದ ಅಂಜಿನಮ್ಮ ವಿಜಕುಮಾರ್, ಸದಸ್ಯರಾದ ಎ. ಆರೀಫ್ ಅಲಿ, ದಾದಾವಲಿ, ಬರ್ಕತ್ ಅಲಿ, ಎಂ.ಬಿ. ಫೈಜು, ಭೋವಿಕುಮಾರ್, ಫಕೃದ್ದೀನ್ ಅಹ್ಮದ್, ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಅಧಿಕಾರಿಗಳಾದ ದಿನಕರ್, ಗುರುಪ್ರಸಾದ್, ನವೀನ್ ಮತ್ತಿತರರು ಭಾಗವಹಿಸಿ, ಮಾಚಿದೇವರಿಗೆ ಪುಷ್ಪಾರ್ಚನೆ ಮಾಡಿ, ನಮನ ಸಲ್ಲಿಸಿದರು.

error: Content is protected !!