15, 16, 22ನೇ ವಾರ್ಡುಗಳಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ

ದಾವಣಗೆರೆ, ಏ. 6- ಬಿಜೆಪಿ ಸಂಸ್ಥಾಪನ ದಿನವಾದ ಇಂದು ಪಕ್ಷದ ಆದೇಶದ ಮೇರೆಗೆ ಮಹಾ ಶಕ್ತಿ ಕೇಂದ್ರದಲ್ಲಿ  ಪಕ್ಷದ ಧ್ವಜಾಹರೋಹಣ  15, 16  ಮತ್ತು 22  ನೇ ವಾರ್ಡ್ ನ ಪ್ರಮುಖರ ಮತ್ತು ಕಾರ್ಯಕರ್ತರ ಸಭೆ ನಡೆಯಿತು.

ಈ ಸಂಧರ್ಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾಜಿ ಜಿಲ್ಲಾ  ಕಾರ್ಯದರ್ಶಿಗಳು ಹಾಗೂ ಹಾವೇರಿ ಜಿಲ್ಲಾ ಪ್ರಭಾರಿ ಎಲ್.ಎಲ್.ಕಲ್ಲೇಶ್,   ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕ ಹೆಚ್.ದಿವಾಕರ್, ಕೈಗಾರಿಕ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ಚಿಕ್ಕಿ ಮಂಜುನಾಥ ಮಾತಾನಾಡಿದರು. 

ರಾಜ್ಯ ಸಮಿತಿಯ ಸದಸ್ಯರಾದ ಎ.ಸಿ. ರಾಘವೇಂದ್ರ, ಗಣೇಶ್ ರಾವ್, ಸಿದ್ದಪ್ಪ ಅಡಾಣಿ, ಗುಡ್ಡಪ್ಪ, ಚಂದ್ರು, ರುದ್ರೇಶ್ ಸಾಳಂಕಿ, ಹನುಮಂತ ಸುರ್ವೆ, ಮಹಿಳಾ ಮೊರ್ಚಾ ಮುಖಂಡರಾದ ಪುಷ್ಪ ವಾಲಿ, ಗೌರಮ್ಮ ಪಾಟೀಲ್, ದ್ರಾಕ್ಷಯಣಮ್ಮ, ರೂಪ ದೀಪಕ್, ಶಾರದ ರಾಯ್ಕರ್,  ರವಿ, ರವಿ ಬೆಸ್ತಾರ್,  ಮತ್ತಿತರರು ಉಪಸ್ಥಿತರಿದ್ದರು.

error: Content is protected !!