ಸೂರ್ಯ ಗ್ರಹಣ

ಇಂದು ಮುಂಜಾನೆ ಬೇಗನೆ
ಚಿಲಿಪಿಲಿ ಗುಟ್ಟುತ್ತಾ ಹಕ್ಕಿಗಳು
ಗೂಡು ಬಿಟ್ಟು ಹಾರಿ ಹೋದವು
ಮೂಡಣದಿ ಸೂರ್ಯ ಮಬ್ಬಾಗಿ
ಕಾರ್ಮೋಡಗಳು ತುಂಬಿ ಕಪ್ಪಾಗಿ
ವಾತಾವರಣವು ದುಗುಡದಿಂದಾಗಿ
ಜನ ಜಂಗುಳಿಯಿಲ್ಲ
ವಾಹನಗಳ ಓಡಾಟವಿಲ್ಲ
ಊರೆಲ್ಲಾ ತಣ್ಣಗೆ ನಿಶ್ಶಬ್ದ
ಪಕ್ಷಿಗಳು ಚಿಲಿಪಿಲಿ ಗುಟ್ಟುತ್ತಾ
ಗಲಿಬಿಲಿಗೊಂಡು ಮರಳಿ
ಗೂಡನ್ನು ಸೇರುವ ತವಕ
ಎಲ್ಲರನ್ನೂ ಕಾಪಾಡುವವನಿಗೆ
ರಕ್ಷಣೆ ಮಾಡುವ ರಕ್ಷಕನಿಗೆ
ಗ್ರಹಣ ಹಿಡಿದಿದೆ ಸೂರ್ಯನಿಗೆ
ಎಲ್ಲರೂ ಮನೆಯಲ್ಲಿ ಕುಳಿತು
ದೂರದರ್ಶನದಲ್ಲಿ ತೋರಿಸುವ
ಸೂರ್ಯ ಗ್ರಹಣವನ್ನು ನೋಡುವ
ಯಜಮಾನನಿಗೆ ಬಂದ ಕಷ್ಟ
ನಿರ್ವಿಘ್ನವಾಗಿ ದೂರವಾಗಿ
ಜಗತ್ತಿಗೇ ಬೆಳಕನ್ನು ತೋರಲಿ .


ಹೆಚ್.ಕೆ.ಸತ್ಯಭಾಮಾ ಮಂಜುನಾಥ
ದಾವಣಗೆರೆ.

error: Content is protected !!