ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಜೀವನಮೂರ್ತಿ

ದಾವಣಗೆರೆ ತಾಲ್ಲೂಕಿನ ಅಣಬೇರು ಗ್ರಾಮದ ಬಿಜೆಪಿ ಮುಖಂಡ ಇ.ಜೀವನಮೂರ್ತಿ ಅವರು ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ರಾಗಿ  ನೇಮಕಗೊಂಡಿದ್ದಾರೆ. ಚಿತ್ರದುರ್ಗದ ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಕಛೇರಿ ಯಲ್ಲಿ ಜೀವನಮೂರ್ತಿ ಅವರು ಇಂದು ಅಧಿಕಾರ ಸ್ವೀಕರಿಸಲಿ ದ್ದಾರೆ. ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದು, ಶುಭ ಹಾರೈಸುವಂತೆ ಮಾಯಕೊಂಡ ವಿಧಾನ ಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಶ್ಯಾಗಲೆ ದೇವೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಕರಿಲಕ್ಕೇ ನಹಳ್ಳಿ‌ ಓಂಕಾರಪ್ಪ, ಹೆಬ್ಬಾಳು ಮಹೇಂದ್ರ, ಹಿಂಡಸಕಟ್ಟೆ  ಮಹಾಬಲೇಶ್ ಕೋರಿದ್ದಾರೆ.

error: Content is protected !!