ಬಿತ್ತನೆ ವೇಳೆ ಟ್ರ್ಯಾಕ್ಟರ್ ಡಿಕ್ಕಿ : ಸಾವು

 ಚನ್ನಗಿರಿ, ಜೂ.25- ಹೊಲದಲ್ಲಿ ಬಿತ್ತನೆ ಕಾರ್ಯ ಮಾಡುವಾಗ ಟ್ರ್ಯಾಕ್ಟರ್ ಡಿಕ್ಕಿಯಾದ ಪರಿಣಾಮ ಕೃಷಿಕನೋರ್ವ ಮೃತಪಟ್ಟಿರುವ ಘಟನೆ ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚನ್ನಗಿರಿ ತಾಲ್ಲೂಕು ಸಿದ್ದನಮಠದ ಶಿವಮೂರ್ತಿ (42) ಮೃತ ದುರ್ದೈವಿ. ಸ್ವಂತ ಹೊಲದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುವಾಗ ಟ್ರ್ಯಾಕ್ಟರ್ ಕುಂಟೆಗೆ ಕಸ ಕಟ್ಟಿದ್ದನ್ನು ಈತ ತೆಗೆಯಲು ಹೋದಾಗ, ಚಾಲಕನು ಟ್ರ್ಯಾಕ್ಟರ್ ಅನ್ನು ಹಿಂದಕ್ಕೆ ಚಾಲನೆ ಮಾಡಿದ್ದರಿಂದ ಬಲವಾದ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಿಸದೇ ಮೃತಪಟ್ಟಿದ್ದಾನೆ.

error: Content is protected !!