ದಾವಣಗೆರೆ ಹಳೇಪೇಟೆಯ ಶ್ರೀ ವೀರ ಭದ್ರೇಶ್ವರ ಸ್ವಾಮಿಯ ರಥೋತ್ಸವವು ಇದೇ ದಿನಾಂಕ 6 ರಂದು ನಡೆಯಲಿದೆ.
ರಥೋತ್ಸವ ಕಾರ್ಯಕ್ರಮದ ನಿಮಿತ್ತ ಇಂದು ಬೆಳಿಗ್ಗೆ 6 ಗಂಟೆಗೆ ಸ್ವಾಮಿಗೆ ರುದ್ರಾಭಿಷೇಕ ನಂತರ ಬೆಳಿಗ್ಗೆ 9 ಕ್ಕೆ ರುದ್ರ ಸಂತರ್ಪಣೆ ಇರಲಿದ್ದು, ನಾಳೆ ಬುಧವಾರ ಬೆಳಿಗ್ಗೆ 6 ಗಂಟೆಗೆ ಗುಗ್ಗಳ ಮತ್ತು ಅಗ್ನಿಕುಂಡ ಹಾಗೂ ಉತ್ಸವ ನಗರದ ಬೀದಿಗಳಲ್ಲಿ ಜರುಗಲಿದೆ. ನಾಡಿದ್ದು ಗುರುವಾರ ಸಂಜೆ 7 ಗಂಟೆಗೆ ರಥೋತ್ಸವ ನಡೆಯಲಿದ್ದು, ದಿನಾಂಕ
7 ರಂದು ರಾತ್ರಿ 8 ಗಂಟೆಗೆ ಓಕುಳಿ ಉತ್ಸವ ಜರುಗುವುದು.