ನಗರದ 19, 20ನೇ ವಾರ್ಡ್‌ಗಳಲ್ಲಿ ಇಂದು ಎಸ್ಸೆಸ್ ಪ್ರಚಾರ

19 ಮತ್ತು 20 ವಾರ್ಡ್ ಭಾರತ್ ಕಾಲೋನಿ, ಅಣ್ಣಾ ನಗರ, ಕಬ್ಬೂರ್ ಬಸಪ್ಪ ನಗರ, ಹೆಚ್.ಕೆ.ಆರ್. ನಗರ, ಶೇಖರಪ್ಪ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಅವರಿಂದ ಇಂದು ಬೆಳಿಗ್ಗೆ 9-30 ಗಂಟೆಯಿಂದ ಭಾರತ್ ಕಾಲೋನಿಯ ಗಣೇಶ ಹೋಟೆಲ್ ನಿಂದ ಆರಂಭಗೊಳ್ಳಲಿದೆ.

ಕಾಂಗ್ರೆಸ್ ಅಧ್ಯಕ್ಷ ಅಯೂಬ್, ಪಾಲಿಕೆ ಸದಸ್ಯರಾದ ಶ್ರೀಮತಿ ಮೀನಾಕ್ಷಿ ಜಗದೀಶ್ ಮತ್ತು ಇತರರು ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತಿಳಿಸಿದ್ದಾರೆ.

error: Content is protected !!