ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಉಚಿತ ಮಜ್ಜಿಗೆ, ನೀರು ವಿತರಣೆ

ದಾವಣಗೆರೆ, ಏ. 3-  ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಇದೇ ದಿನಾಂಕ 6 ರಿಂದ ಮೇ 6 ರವರೆಗೆ ಒಂದು ತಿಂಗಳ ಕಾಲ ಮಜ್ಜಿಗೆ ಮತ್ತು ನೀರು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಿಸಿಲಿನ ತಾಪದಿಂದ ಬಳಲಿದ ಸಾರ್ವಜನಿಕರಿಗೆ ದಾಹ ತೀರಿಸುವ ನಿಟ್ಟಿನಲ್ಲಿ ಸತತವಾಗಿ ಕಳೆದ ಆರು ವರ್ಷಗಳಿಂದ ನಗರದ ವಿವಿಧ ಕಡೆಗಳಲ್ಲಿ ಮಜ್ಜಿಗೆ, ನೀರನ್ನು ವಿತರಿಸಲಾಗುತ್ತಿದೆ ಎಂದರು. ನಗರದ ಜಯದೇವ ವೃತ್ತ, ಚಿಗಟೇರಿ ಜಿಲ್ಲಾಸ್ಪತ್ರೆ, ಕೆ.ಆರ್. ಮಾರ್ಕೆಟ್ (ಹೆರಿಗೆ ಆಸ್ಪತ್ರೆ), ರಾಮ್ ಅಂಡ್ ಕೋ ವೃತ್ತದಲ್ಲಿ ನೀರು ಹಾಗೂ ಮಜ್ಜಿಗೆ ವಿತರಣೆ ಮಾಡಲಾಗುವುದು. ಜೊತೆಗೆ ಜ್ಞಾನ ದಾಸೋಹಕ್ಕಾಗಿ ಕೆಲವು ಪುಸ್ತಕಗಳು, ಪೋಸ್ಟರ್‌ಗಳನ್ನೂ ಸಹ ನೀಡಲಾಗುತ್ತದೆ ಎಂದು ಹೇಳಿದರು.

ದಾನಿಗಳು ನಗರದ ನಾಲ್ಕು ಕಡೆಗಳಲ್ಲಿ ಒಂದು ದಿನ ನೀರು ಮತ್ತು ಮಜ್ಜಿಗೆ ವಿತರಣೆಗಾಗಿ 6000 ಹಾಗೂ ಒಂದೇ ಕಡೆ ಒಂದು ದಿನ ವಿತರಣೆಗೆ 1500 ರೂ. ಗಳನ್ನು ನೀಡಬೇಕಾಗುತ್ತದೆ. ದಾನಿಗಳೇ ನೇರವಾಗಿ ಖರ್ಚು ಭರಿಸಬಹುದು ಅಥವಾ ತಮಗೆ ತೋಚಿದಷ್ಟು ಧನ ಸಹಾಯವನ್ನೂ ಸಹ ಮಾಡಬಹುದು ಎಂದು ತಿಳಿಸಿದರು. ದಾನಿಗಳು ಕರುಣಾ ಜೀವ ಕಲ್ಯಾಣ ಟ್ರಸ್ಟ್ ದಾವಣಗೆರೆ ಇವರ ಬ್ಯಾಂಕ್ ಖಾತೆ ಸಂಖ್ಯೆ: 50100332805356, ಐಎಫ್‌ಎಸ್‌ಸಿ ಕೋಡ್: 0000403 ಗೆ ಧನಸಹಾಯ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ9110455199, 9538024422 ಗೆ ಸಂಪರ್ಕಿಸಲು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಶ್ರೀಮತಿ ಮಂಜುಳಾ ಬಸವಲಿಂಗಪ್ಪ, ಪ್ರೊ. ಎಂ. ಬಸವರಾಜ್, ಎಂ.ಬಿ. ಮಧುಸೂದನ ಉಪಸ್ಥಿತರಿದ್ದರು. 

error: Content is protected !!