ಮಳಲ್ಕೆರೆಯಲ್ಲಿ ನಾಳೆ ರಥೋತ್ಸವ

ಮಳಲ್ಕೆರೆಯಲ್ಲಿ ನಾಳೆ ರಥೋತ್ಸವ - Janathavaniದಾವಣಗೆರೆ, ಮಾ.29- ತಾಲ್ಲೂಕಿನ ಮಳಲ್ಕೆರೆ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ನಾಡಿದ್ದು ದಿನಾಂಕ 31 ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಜರುಗಲಿದೆ.   

ಇದೇ ಸಂದರ್ಭದಲ್ಲಿ ದಾನಿಗಳಾದ ದಾವಣಗೆರೆ ವಾಸು ಇಂಡಸ್ಟ್ರೀಸ್‌ ಮಾಲೀಕ ಕೆ.ಸಿ. ನಾಗೇಂದ್ರಪ್ಪ, ಮಳಲ್ಕೆರೆ ಉಜೈನಿಗಳ ಎಂ.ಎಸ್‌. ಪರಮೇಶ್ವರಯ್ಯ, ಮಳಲ್ಕೆರೆ ಎಂ.ಜೆ. ಭೀಮಣ್ಣರ ಭೀಮೇಶ್‌, ನಿವೃತ್ತ ಇಂಜಿನಿಯರ್ ಬಿ.ಹೆಚ್. ಕರಿಯಪ್ಪ ಅವರುಗಳನ್ನು ಸನ್ಮಾನಿಸಲಾಗವುದು ಎಂದು ದೇವಸ್ಥಾನದ ಕನ್ವೀನರ್‌ ವರ್ತಕ ಎಂ.ಎಸ್‌. ಮಹೇಶ್ವರಯ್ಯ ಹಾಗು ಧರ್ಮದರ್ಶಿಗಳು ತಿಳಿಸಿದ್ದಾರೆ.

ಇದೇ ದಿನ ರಾತ್ರಿ 8 ಗಂಟೆಗೆ ತರಿಕೆರೆ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

error: Content is protected !!