ಬಿಜೆಪಿ ದ್ವೇಷದ ರಾಜಕಾರಣ ಮೀಸಲಾತಿ ಗೊಂದಲ ಸೃಷ್ಟಿ

ಬಿಜೆಪಿ ದ್ವೇಷದ ರಾಜಕಾರಣ ಮೀಸಲಾತಿ ಗೊಂದಲ ಸೃಷ್ಟಿ - Janathavaniದಾವಣಗೆರೆ, ಮಾ.26- ರಾಜ್ಯದ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು ಈ ಮೂಲಕ ಮೀಸಲಾತಿ ಗೊಂದಲ ಸೃಷ್ಟಿ ಮಾಡಿದೆ ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಟೀಕಿಸಿದ್ದಾರೆ.

ಈ ಹಿಂದೆ ಅಲ್ಪಸಂಖ್ಯಾತ ಸಮುದಾಯದವರಿಗೆ ಕಾಂಗ್ರೆಸ್ ಸರ್ಕಾರ ಶೇ.4 ರಷ್ಟು ಮೀಸ ಲಾತಿಯನ್ನು ನೀಡಿದ್ದು, ಅದನ್ನು ಹಿಂಪಡೆದು ಆರ್ಥಿಕವಾಗಿ ಹಿಂ ದುಳಿದವರಿಗೆ ನೀಡುವ ಮೀಸಲಾತಿಯನ್ನು ನೀಡಲಾಗುವುದು ಎಂಬುದು ಕೇವಲ ಕಣ್ಣೋರೆಸುವ ತಂತ್ರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟ ಜಾತಿಯವರೆಗೆ ಇನ್ನು ಶೇ.15ರಿಂದ 17ಕ್ಕೆ ಮೀಸಲಾತಿ ಹೆಚ್ಚಿಸಿಲ್ಲ. ಆದರೂ ಒಳ ಮೀಸಲಾತಿ ಹೆಸರಿನಲ್ಲಿ ಅವರಿಗೂ ದ್ರೋಹ ಬಗೆಯಲಾಗಿದೆ. ಈ ಹಿಂದಿನಿಂದಲೂ ವೀರಶೈವ-ಲಿಂಗಾಯತರಿಗೆ 2ಎ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಇದ್ದರೂ ಸಹ, ಮತ್ತೊಮ್ಮೆ ಕಣ್ಣೋರೆಸುವ ತಂತ್ರ ಮಾಡಿರುವ ಬಿಜೆಪಿ, ಮೀಸಲಾತಿ ಶೇಕಡ 50ರಷ್ಟು ಮೀರಬಾರದು ಎಂಬುದನ್ನೇ ಬಂಡವಾಳವಾಗಿ ಇಟ್ಟುಕೊಂಡು ಜಾತಿ-ಜಾತಿ ಮಧ್ಯೆ ಮೀಸಲಾತಿ ಗೊಂದಲವನ್ನು ಸೃಷ್ಟಿಸಿ ದ್ವೇಷ ಮೂಡಿಸುತ್ತಿದೆ ಎಂದು ಆರೋಪಿಸಿದ್ದಾರೆ .

ಈ ಕುರಿತಂತೆ ರಾಜ್ಯ ನಾಯಕರುಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಮೀಸಲಾತಿ ಗೊಂದಲದ ಬಗ್ಗೆ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ತಿಳಿಸಿದ್ದಾರೆ.

error: Content is protected !!