ಕರಾಟೆ ಸ್ಪರ್ಧೆ : ನಗರದ ಪೃಥ್ವಿ ಪ್ರಥಮ

ಕರಾಟೆ ಸ್ಪರ್ಧೆ : ನಗರದ  ಪೃಥ್ವಿ ಪ್ರಥಮ

ದಾವಣಗೆರೆ,ಮಾ.26-  ಬೆಂಗಳೂರಿನ  ಓ.ಎಸ್.ಕೆ.ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಜರುಗಿದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ  ನಗರದ ಹಳೇ ಪೇಟೆ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ  6ನೇ ತರಗತಿ ವಿದ್ಯಾರ್ಥಿ ಆರ್. ಪೃಥ್ವಿ  ಪ್ರಥಮ ಸ್ಥಾನ ಗಳಿಸಿದ್ದಾನೆ. 

ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ  ನಡೆದ ಸರಳ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಂಬಣ್ಣನವರು ಪೃಥ್ವಿಗೆ ಪ್ರಶಸ್ತಿ ಪತ್ರ ಮತ್ತು ಪಾರಿತೋಷಕ  ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಜಿಲ್ಲಾ ಅಧ್ಯಕ್ಷ  ಶಿವಕ್ಳ ಆಂಜನೇಯ, ಜಿಲ್ಲಾ ಕಾರ್ಯದರ್ಶಿ ನಿಂಗರಾಜ್ ಹಾವನೂರು, ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ. ದಾಸರ್,  ಎಸ್.ಡಿ.ಎಂ.ಸಿ.ಅಧ್ಯಕ್ಷ ಕೋಡಬಾಳು ಚೆನ್ನಬಸಪ್ಪ,    ಸಿ.ಆರ್.ಪಿ. ಸದಾನಂದ,   ಶಿಕ್ಷಕಿಯರಾದ ನಮಿತಾ.ಎಂ.ಎನ್, ವಿಜಯಕುಮಾರಿ, ಸಂಪತ್ ಕುಮಾರಿ, ಮಮತ ಡಿ.ಜಿ, ಕಲ್ಪನ, ಜಯಶ್ರೀ, ಸುಜಾತ ಮತ್ತಿತರರು ಉಪಸ್ಥಿತರಿದ್ದರು.

error: Content is protected !!