ಬಿಐಇಟಿಯಲ್ಲಿ ಇಂದು ‘ನಮ್ಮ ದವನ -23′

ದಾವಣಗೆರೆ, ಮಾ.23- ನಗರದ ಬಾಪೂಜಿ ತಾಂತ್ರಿಕ ಮತ್ತು ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ನಾಳೆ ದಿನಾಂಕ 24, 25 ಹಾಗೂ 26 ರಂದು ‘ನಮ್ಮ ದವನ -23′ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಲೇಜಿನ ಬಯೋಟೆಕ್ ವಿಭಾಗದ ಮುಖ್ಯಸ್ಥ ಜಿ.ಪಿ.ದೇಸಾಯಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಿಐಇಟಿ ಕಾಲೇಜಿನ ಫುಟ್ಬಾಲ್ ಆಟದ ಮೈದಾನದಲ್ಲಿ ಒಟ್ಟು ಮೂರು ದಿನಗಳ ಕಾಲ ಜಿಲ್ಲಾ ಮಟ್ಟದ ಅಂತರ್‌ ವಿಭಾಗ ಹಾಗೂ ಅಂತರ ಕಾಲೇಜು ಸ್ಪರ್ಧೆಗಳು ನಡೆಯಲಿವೆ. ಮೊದಲ ಎರಡು ದಿನ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯಲಿದ್ದು, ಕೊನೆಯ ದಿನ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ ಎಂದರು.

ನಾಳೆ ದಿನಾಂಕ 24ರ ಶುಕ್ರವಾರ ಸಂಜೆ 6.30ಕ್ಕೆ ಜರುಗಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಣೇಬೆನ್ನೂರಿನ ಎಸ್‌.ಟಿ.ಜೆ.ಐ.ಟಿ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಇ ಶಿವಕುಮಾರ್‌ ಹೊನ್ನಾಳಿ ಆಗಮಿಸಲಿದ್ದಾರೆ.  ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ಡಾ.ಎಸ್‌.ಎನ್‌ ರಮೇಶ್‌, ಎಂ.ಸಿ. ಪಾಟೀಲ್,  ಡಾ.ಕೆ.ಸಿ.ದೇವೇಂದ್ರಪ್ಪ,  ಡಾ.ಹೆಚ್.ಪಿ.ವಿನುತಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಲೇಜು ಪ್ರಾಚಾರ್ಯ ಡಾ.ಹೆಚ್.ಬಿ.ಅರವಿಂದ್, ಡಾ.ಕೆ.ಸಿ ದೇವೇಂದ್ರಪ್ಪ, ಡಾ.ವಿನುತಾ, ಪ್ರೊ.ಭಾಗ್ಯ, ವಾಸುದೇವ ನಾಯಕ, ಗಿರೀಶ್.ಸಿ, ವೇಣುಕುಮಾರ್‌ ಕೆ.ಬಿ, ಅಪೇಕ್ಷ.ವಿ, ಕರಿಬಸವರಾಜ್‌ ಮತ್ತಿತರರಿದ್ದರು.

error: Content is protected !!