ಅಗ್ನಿ ಅವಘಡದಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ರೇಣುಕಾಚಾರ್ಯ ಸಹಾಯ

ಅಗ್ನಿ ಅವಘಡದಿಂದ ಮನೆ ಕಳೆದುಕೊಂಡ  ಕುಟುಂಬಕ್ಕೆ ರೇಣುಕಾಚಾರ್ಯ ಸಹಾಯ

ಹೊನ್ನಾಳಿ, ಮಾ. 14- ಆಕಸ್ಮಿಕ ಅಗ್ನಿ ಅವಘಡದಿಂದ ಮನೆ ಕಳೆದುಕೊಂಡ ಸಂತ್ರಸ್ತ ಮೂರು ಕುಟುಂಬಗಳಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವೈಯಕ್ತಿಕವಾಗಿ ತಲಾ ಹತ್ತು ಸಾವಿರ ಧನ ಸಹಾಯ ಹಾಗೂ ಮೂರು ಕುಟುಂಬಗಳಿಗೆ ದವಸ-ಧಾನ್ಯ, ಬಟ್ಟೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಾಸಡಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮೂರು ಮನೆಗಳು ಸುಟ್ಟುಹೋಗಿದ್ದು, ಜಾನುವಾರು ಸಹ ಸಾವನ್ನಪ್ಪಿವೆ.

ವಿಷಯ ತಿಳಿಯುತ್ತಿದ್ದಂತೆ ರಾತ್ರೋರಾತ್ರಿ ಗ್ರಾಮಕ್ಕೆ ಭೇಟಿ ನೀಡಿದ ರೇಣುಕಾಚಾರ್ಯ ಅವರು, ಮೂರು ಕುಟುಂಬಗಳಿಗೆ ಸಾಂತ್ವನ ಹೇಳಿ, ವೈಯಕ್ತಿಕ ತಲಾ ಹತ್ತು ಸಾವಿರ ಸಹಾಯ ಮಾಡಿ ಪರಿಹಾರದ ಭರವಸೆ ಕೊಟ್ಟರು.

ಚಂದ್ರಮ್ಮ ರಾಜಪ್ಪ, ಗಂಗಮ್ಮ ಹಾಲಪ್ಪ, ಶಿವಮ್ಮ ಪರಸಪ್ಪ ಕುಟುಂಬಗಳಿಗೆ ಅಗತ್ಯ ಸಾಮಗ್ರಿ ಕೊಡಿಸುವುದರ ಜೊತೆಗೆ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಆತ್ಮಸ್ಥೈರ್ಯ ಹೇಳಿದರು. ಈ ವೇಳೆ ಗ್ರಾಮಸ್ಥರಾದ ಗ್ರಾ.ಪಂ. ಮಾಜಿ ಅಧ್ಯಕ್ಷ ಅಶೋಕ್, ಗ್ರಾಮಸ್ಥರಾದ ಹನುಮಂತಪ್ಪ, ಹನುಮಂತ ಮತ್ತಿತರರು ಉಪಸ್ಥಿತರಿದ್ದರು.

error: Content is protected !!