ಪತ್ರಕರ್ತರ ಸಂಘದ ಸದಸ್ಯತ್ವಕ್ಕೆ ಅರ್ಜಿ

ದಾವಣಗೆರೆ, ಮಾ.7- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವಕ್ಕೆ ಅರ್ಜಿ  ಅಹ್ವಾನಿಸಲಾಗಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಇ.ಎಂ ಮಂಜುನಾಥ ತಿಳಿಸಿದ್ದಾರೆ.

2023-24ನೇ ಸಾಲಿನ ಹೊಸ ಸದಸ್ಯತ್ವ ಹಾಗೂ ನವೀಕರಣ ಮಾಡಿಕೊ ಳ್ಳಲು ಮಾರ್ಚ್ 10  ಕೊನೆಯ ದಿನವಾಗಿದೆ. ಹೊಸ ಸದಸ್ಯತ್ವ ಪಡೆಯಲು ಕನಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿರಬೇಕು.  ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಪರ್ಯಾಯ ಸಂಘದಲ್ಲಿ ಸದಸ್ಯರಾಗಿರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ತಿರಸ್ಕೃತಗೊಂಡ ಅರ್ಜಿಗಳ ಸದಸ್ಯತ್ವದ ಹಣವನ್ನು ಹಿಂದಿರುಗಿಸಲಾಗುವುದಿಲ್ಲ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್ ತಿಳಿಸಿದ್ದಾರೆ.

ಅರ್ಜಿ ಪಡೆಯಲು ಸಂಘದ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್ ಅವರ ಕಚೇರಿ `ದಾವಣಗೆರೆ ಇಮೇಜ್ ಪತ್ರಿಕೆ ಕಾರ್ಯಾಲಯ’ ಸಿಟಿ ಸೆಂಟ್ರಲ್ ಹಾಸ್ಪಿಟಲ್ ಹಿಂಭಾಗ, ಪಿ.ಜೆ. ಬಡಾವಣೆ, ದಾವಣಗೆರೆ ಇಲ್ಲಿ ಸಲ್ಲಿಸಬಹುದಾಗಿದೆ. 

ಮಾಹಿತಿಗೆ ಅಧ್ಯಕ್ಷ ಇ.ಎಂ.ಮಂಜುನಾಥ 9448277772, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್ 8494949909, ಖಜಾಂಚಿ ಎನ್.ವಿ. ಬದರಿನಾಥ್ 9448728858 ಸಂಪರ್ಕಿಸಬಹುದು.

error: Content is protected !!