ಜಿಲ್ಲೆಯಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ 7 ಕೋಟಿ ರೂ. ಮಂಜೂರು

ಜಿಲ್ಲೆಯಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್  ನಿರ್ಮಾಣಕ್ಕೆ 7 ಕೋಟಿ ರೂ. ಮಂಜೂರು

 ದಾವಣಗೆರೆ,ಮಾ.4-  ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್  ನಿರ್ಮಾಣ ಮಾಡುವಂತೆ  ಸಂಸದ ಜಿ.ಎಂ. ಸಿದ್ದೇಶ್ವರ ಅವರು ಸಲ್ಲಿಸಿದ್ದ ಯೋಜನೆ ಪ್ರಸ್ತಾವವನ್ನು  ಅಂಗೀಕರಿಸಿರುವ  ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆ ಅದಕ್ಕಾಗಿ 7 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

ಈ ಸಂಬಂಧ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಿಗೆ  ಮಾಹಿತಿ ನೀಡಿರುವ ಕೇಂದ್ರ ಕ್ರೀಡಾ ನಿರ್ದೇಶಕ  ಅರುಣ್ ಕುಮಾರ ಯಾದವ್, ಕೂಡಲೇ ಯೋಜನೆ  ಕಾರ್ಯ ಗತಗೊಳಿಸಲು    ಭೂಮಿ ಮತ್ತಿತರೆ ವಿಷಯಗಳ ಕುರಿತು ಮಾಹಿತಿ  ನೀಡುವಂತೆ ಸೂಚಿಸಲಾಗಿದೆ.   ಖೇಲೋ ಇಂಡಿಯಾ ಯೋಜನೆ ಮಾರ್ಗಸೂಚಿ ಯಂತೆ ವಿಧಿ-ವಿಧಾನಗಳು ಪೂರ್ಣವಾಗುತ್ತಲೇ ಹಣ ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ. 

error: Content is protected !!