ಬಸವ ಕಲ್ಯಾಣದಲ್ಲಿ ನಾಳೆ ಲಿಂಗಾಯತ ಮಹಾ ಅಧಿವೇಶನ

ದಾವಣಗೆರೆ, ಮಾ. 2 –  ನಾಡಿದ್ದು ದಿನಾಂಕ 4 ಹಾಗೂ 5ರಂದು ಬಸವ ಕಲ್ಯಾಣದಲ್ಲಿ ಪ್ರಥಮ ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನ ನಡೆಯಲಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಅಗಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಧಿವೇಶನದ ಸಾನ್ನಿಧ್ಯವನ್ನು ಸಾಣೇಹಳ್ಳಿ ಪೀಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ ಎಂದು ಹೇಳಿದರು. ಅಧಿವೇಶನದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌, ಎಸ್.ಎಂ. ಜಾಮದಾರ್, ಸಾಹಿತಿ ಸಿದ್ದರಾಮಯ್ಯ, ಶ್ರೀ ನಿಜಗುಣಾನಂದ ಸ್ವಾಮೀಜಿ, ಸಾಹಿತಿ ರಂಜಾನ್ ದರ್ಗಾ ಮತ್ತಿತರರು ಭಾಗವಹಿಸಲಿದ್ದಾರೆ.

200ಕ್ಕೂ ಹೆಚ್ಚು ಮಠಾಧೀಶರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಧಿವೇಶನದಲ್ಲಿ ಪ್ರತ್ಯೇಕ ಲಿಂಗಾ ಯತ ಧರ್ಮ ಮಾನ್ಯತೆ ಸೇರಿದಂತೆ ಹಲವಾರು ವಿಷಯ ಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಮುಖಂಡರಾದ ಹುಚ್ಚಪ್ಪ ಮಾಸ್ತರ್, ಮರುಳಸಿದ್ದಯ್ಯ ಬಸವನಾಳ್, ಆವರಗೆರೆ ರುದ್ರಮುನಿ, ರುದ್ರಗೌಡ ಗೋಪನಾಳ್‌, ಸಿದ್ದರಾಮಯ್ಯ, ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!