ಸವಿತಾ ಸಮಾಜದವರು ಕೀಳರಿಮೆ ತೊರೆಯಲಿ

ಸವಿತಾ ಸಮಾಜದವರು ಕೀಳರಿಮೆ ತೊರೆಯಲಿ

ಜಗಳೂರು: ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸವಿತಾನಂದನಾಥ ಶ್ರೀ ಸಲಹೆ

ಜಗಳೂರು, ಮಾ.2- ಸವಿತಾ ಸಮಾಜದ ಬಗ್ಗೆ ಸಮಾಜ ಕೀಳರಿಮೆ ತೊರೆಯಬೇಕು.ಬೌದ್ದ, ಸನಾತನ, ಧರ್ಮ ಪ್ರಚಾರಕರಲ್ಲಿ ನಮ್ಮ ಪಾತ್ರವಿದೆ.ತ್ರಿವರ್ಣ ಧ್ವಜದ ಅಶೋಕ ಚಕ್ರ, ರಾಷ್ಟ್ರ ಲಾಂಛನದಲ್ಲಿನ ಪ್ರತೀಕವಾಗಿರುವ ಸಾಮ್ರಾಟ್ ಅಶೋಕ ನಮ್ಮ ಸಮಾಜದವರು ಎಂಬುದನ್ನು ಮನಗಾಣಬೇಕಿದೆ ಎಂದು ಚಿತ್ತಾಪುರ ತಾಲ್ಲೂಕು ಕೊಂಚೂರು ಗ್ರಾಮದ ಸವಿತಾ ಪೀಠ ಮಹಾಸಂಸ್ಥಾನದ ಶ್ರೀ ಸವಿತಾನಂದನಾಥ ಮಹಾಸ್ವಾಮೀಜಿ ಕರೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸವಿತಾ ಸಮಾಜದಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹೊಟ್ಟೆ ಹಸಿವಿಗಿಂತ ಮಸ್ತಕದ ಹಸಿವು ನೀಗಿಸಿಕೊಳ್ಳಬೇಕು. ಜೊತೆಗೆ ಮಂಗಳವಾರ ಕಾಯಕ ರಜಾ ದಿನ ವಾರಪೂರ್ತಿ ಶ್ರಮದ ಹಣವನ್ನು ವಿನಾಕಾರಣ ವ್ಯಯಮಾಡದೆ. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಮುಖ್ಯವಾಹಿನಿಗೆ ಬರಬೇಕು.

ಮಹಿಳೆಯರು ಪ್ರತಿವಾರಕ್ಕೊಮ್ಮೆ ನೆರೆಹೊರೆಯ ಮನೆಗಳಲ್ಲಿ  ಸೇರಿಕೊಂಡು ಗಾಯಿತ್ರಿ ಮಂತ್ರ ಪಠಿಸಿ ಉಪಾಸನೆ ಪ್ರಸಾದ ಸ್ವೀಕರಿಸುವ ಮೂಲಕ ಸಮುದಾಯದ ಮಹಿಳೆಯರು ಸಂಘಟಿತರಾಗಲು ಎಂದು ಕರೆ ನೀಡಿದರು.

ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ, ಗಾಯಿತ್ರಿ ಮಂತ್ರವನ್ನು ಧಾರೆ ಎರೆದ ಶೋಷಿತ ಸಮುದಾಯ ಸವಿತಾ ಸಮಾಜವಾಗಿದೆ ಎಂದರು. ಸಮಾಜದ ದಾರ್ಶನಿಕರ ಜಯಂತಿಗಳಲ್ಲಿ  ಕುಣಿದು ಕುಪ್ಪಳಿಸದೆ ಅವರ ಆದರ್ಶಗಳನ್ನು ವೇದಿಕೆ ಕಾರ್ಯಕ್ರಮಗಳ ಮೂಲಕ  ಯುವ ಪೀಳಿಗೆಗೆ ಪಸರಿಸಬೇಕು. ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟ ನಡೆಸಬೇಕಿದೆ. ವಂಶ ಪರಂಪರೆ ಕಾಯಕ ತೊರೆದು ಮಕ್ಕಳು ಉನ್ನತ ಶಿಕ್ಷಣ, ಉದ್ಯೋಗ ಅವಲಂಬಿಸಬೇಕು. ಸಮಾಜದವರು ಚಿಂತನೆ ನಡೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಪಿಸಿಸಿ ಎಸ್‌ಟಿ ಘಟಕದ ಕೆ.ಪಿ. ಪಾಲಯ್ಯ, ಸವಿತಾ ಸಮಾಜದ ಪೂಜ್ಯ ಗುರುಗಳ ಆಶೀರ್ವಾದ ಪಡೆದು ತಮ್ಮ ಒಗ್ಗಟ್ಟು ಕಾಪಾಡಿಕೊಳ್ಳಬೇಕು.ವೃತ್ತಿಯಲ್ಲಿ ಶ್ರಮಜೀವಿ ಗಳಾಗಿರುವ ತಮ್ಮ ಕಾಯಕ ಶ್ಲ್ಯಾಘನೀಯ ಎಂದರು.

ವೆಂಕಟಚಲಾಶಾಸ್ತ್ರಿ ವಿಶೇಷ ಉಪನ್ಯಾಸ ನೀಡಿ, ವ್ಯಕ್ತಿಯ ಅನಗತ್ಯ ಕೇಶಗಳನ್ನು ತೆಗೆದು ಸ್ವಚ್ಛತೆಗೊಳಿಸಿ ಸುಂದರವಾಗಿಸುವ ನಾವು, ಸಮಾಜದಲ್ಲಿ ಬೆಳಿಗ್ಗೆ ಎದು ರುಗಡೆ ಬಂದರೆ ಅಪಶಕುನವಂತೆ ಇದು ಬದಲಾಗಬೇಕಿದೆ. 

ಕ್ಷೌರಿಕ ಎಂಬ ಕಾರಣದಿಂದ ವಾಸ ಮಾಡಲು ಬಾಡಿಗೆ ಮನೆ ನಿರಾಕರಣೆಯಿದೆ. ನಮ್ಮ ಸಮಾಜದ ಬಗ್ಗೆ ಸರ್ಕಾರಗಳಿಗೆ ತಾತ್ಸಾರವಿದೆ. ಶಿಕ್ಷಿತರಾಗಿ ಸಂಘಟಿತರಾದರೆ ಎಲ್ಲವೂ ಮುಕ್ತವಾಗುತ್ತವೆ ಎಂದರು.

ಸಂದರ್ಭದಲ್ಲಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಬಾಲರಾಜ್, ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಲುಕ್ಮಾನ್ ಖಾನ್, ಪಾಪಲಿಂಗಪ್ಪ, ರಮೇಶ್ ರೆಡ್ಡಿ, ವಿಎಸ್ಎಸ್‌ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಮುಖಂಡರಾದ ಓಬಳೇಶ್, ವಕೀಲ ಹನುಮಂತಪ್ಪ, ರಮೇಶ್, ಗೌರಿಪುರ ಶಿವಣ್ಣ, ರೇವಣ್ಣ, ಹೊನ್ನೂರುಸ್ವಾಮಿ, ತಿಪ್ಪೇಸ್ವಾಮಿ, ಶಾಂತಪ್ಪ, ಪುಟ್ಟಣ್ಣ, ಸತೀಶ್ ಸೇರಿದಂತೆ ಮತ್ತಿತರರಿದ್ದರು.

error: Content is protected !!