ರೈತರ ಉತ್ಪನ್ನಗಳನ್ನು ರೈತ ಕಂಪನಿಗಳು ಲಾಭದಾಯಕ ಮಾಡಬೇಕು

ರೈತರ ಉತ್ಪನ್ನಗಳನ್ನು ರೈತ ಕಂಪನಿಗಳು ಲಾಭದಾಯಕ ಮಾಡಬೇಕು

ಕಾಕನೂರಿನ ಪ್ರಧಾನ ರೈತ ತರಬೇತಿ ಕಾರ್ಯಕ್ರಮದಲ್ಲಿ ಶಿವಕುಮಾರ್    

ಚನ್ನಗಿರಿ,ಫೆ.23-  ಸಂಪನ್ಮೂಲ ಸಂಸ್ಥೆ  ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಮತ್ತು ಹಿರೇಕೋಗಲೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ವತಿಯಿಂದ, ಚನ್ನಗಿರಿ ತಾಲ್ಲೂಕು ಕಾಕನೂರು ಗ್ರಾಮದಲ್ಲಿ ಪ್ರಧಾನ ರೈತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಂಪನಿಯ ಅಧ್ಯಕ್ಷ  ಶಿವಕುಮಾರ  ತರಬೇತಿ ಕಾರ್ಯಕ್ರಮವ್ನು  ಉದ್ಘಾಟಿಸಿ ಮಾತನಾಡಿ,     ರೈತರು ಬೆಳೆದ ಉತ್ಪನ್ನಗಳನ್ನು ಕಂಪನಿಯ ಮುಖಾಂತರ ನೇರವಾಗಿ ಮಾರಾಟ ಮಾಡುವ  ಮೂಲಕ ರೈತರಿಗೆ ಲಾಭದಾಯಕ ವಾಗುವ  ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕಾಗಿದೆ ಎಂದರು.

ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್ ಅವರು  ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ , ರೈತರು ಮಣ್ಣಿನ ಫಲವತ್ತತೆ ಬಗ್ಗೆ ಹೆಚ್ಚು ಒತ್ತು ಕೊಡಬೇಕು, ಮಣ್ಣಿನ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಹಾಗೂ  ಸ್ಥಳೀಯವಾಗಿ ಸಿಗುವ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಕಂಪನಿಯ ಮುಖಾಂತರ ಮಾರಾಟ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.

ತೋಟಗಾರಿಕೆ ತಜ್ಞ  ಎಂ. ಜಿ. ಬಸವನಗೌಡ ಮಾತನಾಡುತ್ತಾ, ಅಡಿಕೆ ಬೆಳೆಯ ವಿಸ್ತರಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೈತರು   ಸರಿಯಾದ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ ತೋಟಗಳು ಅನೇಕ ರೋಗಗಳಿಗೆ ತುತ್ತಾಗಿ ಇಳುವರಿ ಕುಂಠಿತವಾಗುತ್ತದೆ. ತಾಪಮಾನ ಹೆಚ್ಚಾಗುತ್ತಿರುವುದರಿಂದ ಬೇಸಿಗೆ ಹಂಗಾಮಿನಲ್ಲಿ ರೈತರು ಸಮಗ್ರ ನೀರು ನಿರ್ವಹಣೆ, ಕೀಟ, ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ ಬಗ್ಗೆ ಹೆಚ್ಚು ಒತ್ತು ಕೊಡಬೇಕು ಎಂದರು . 

ಕಂಪನಿಯ ಸಿಇಓ ವಿನಯ್‌ಕುಮಾರ್, ಉಪಾಧ್ಯಕ್ಷ  ಜಗದೀಶ್, ನಿರ್ದೇಶಕರಾದ ಚಂದ್ರಪ್ಪ, ಭರತ್ ರಾಜ್,  ಯಶೋಧಮ್ಮ, ರವಿಕುಮಾರ್, ತಿಪ್ಪೇಸ್ವಾಮಿ  ಮತ್ತಿತರರು ಭಾಗವಹಿಸಿದ್ದರು. ಶಶಿಕಲಾ ಸ್ವಾಗತಿಸಿದರು. ಪವನ್ ಪಾಟೀಲ್  ನಿರೂಪಿಸಿದರು.  

error: Content is protected !!