ಚಿತ್ರದುರ್ಗ, ಫೆ. 22 – ಅನಾರೋಗ್ಯಕ್ಕೆ ತುತ್ತಾಗಿ ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮದಕರಿ ನಾಯಕರ ವಂಶಸ್ಥರಾದ ರಾಜಮಾತೆ ಚಂದ್ರಮ್ಮ ನಾಗತಿಯವರನ್ನು ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ನಂತರ ಚಿಕಿತ್ಸೆಗೆ ಅಗತ್ಯವಿರುವ ನೆರವು ನೀಡುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ ಪರಶುರಾಮ ನಾಯಕ, ಮಂಜುನಾಥ, ಪ್ರಸನ್ನ, ಜಿತೇಂದ್ರ ಹುಲಿಕುಂಟೆ ಇದ್ದರು.
ಚಂದ್ರಮ್ಮ ನಾಗತಿ ಚಿಕಿತ್ಸೆಗೆ ಬಸವಪ್ರಭು ಶ್ರೀ ನೆರವು
![20 chandramma nagathi 23.02.2023 ಚಂದ್ರಮ್ಮ ನಾಗತಿ ಚಿಕಿತ್ಸೆಗೆ ಬಸವಪ್ರಭು ಶ್ರೀ ನೆರವು](https://janathavani.com/wp-content/uploads/2023/02/20-chandramma-nagathi-23.02.2023.jpg)