ನೀಲಾನಹಳ್ಳಿಯಲ್ಲಿ 26 ರಂದು ತೇರು

ನೀಲಾನಹಳ್ಳಿಯಲ್ಲಿ 26 ರಂದು ತೇರು - Janathavaniದಾವಣಗೆರೆ, ಫೆ.21- ತಾಲ್ಲೂಕಿನ ಶ್ರೀ ಕ್ಷೇತ್ರ ನೀಲಾನಹಳ್ಳಿಯ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ ಹಾಗೂ ಕಾರಣಿಕೋತ್ಸವವು ಇದೇ ದಿನಾಂಕ 26 ರ ಭಾನುವಾರ ನಡೆಯಲಿದೆ. 

ದಿನಾಂಕ 24 ರ ಶುಕ್ರವಾರ ರಾತ್ರಿ 9.10 ಕ್ಕೆ ಸ್ವಾಮಿಗೆ ಕಂಕಣಧಾರಣೆ, ದಿನಾಂಕ 25ರ ಶನಿವಾರ ಸಂಜೆ ದೊಡ್ಡಬಾತಿ ಶ್ರೀ ಬೀರಲಿಂಗೇಶ್ವರ ದೇವರ ಆಗಮನ, ಅಂದು ರಾತ್ರಿ ಅರಿಶಿಣ ಎಣ್ಣೆ ನಡೆಯುವುದು.

ದಿನಾಂಕ 26 ರ ಭಾನುವಾರ ಬೆಳಿಗ್ಗೆ 8.30 ಕ್ಕೆ ರಥೋತ್ಸವ, 9.30 ರಿಂದ ಮಧ್ಯಾಹ್ನ 1.30 ರವರೆಗೆ ಭಕ್ತಾದಿಗಳು ಹರಕೆ ತೀರಿಸುವರು.

ಅಂದು ಸಂಜೆ 4.30 ಕ್ಕೆ ಬೇಟೆ ಆಡುವುದು, 5.30 ಕ್ಕೆ ಮುಳ್ಳು ಗದ್ದಿಗೆ ಏರುವುದು, 6.30 ಕ್ಕೆ ಕಾರಣಿಕ ನಡೆಯುವುದು. ರಾತ್ರಿ 7.30 ಕ್ಕೆ ಭೂತ ಸೇವೆ, 8.30 ಕ್ಕೆ ಓಕಳಿ, 9.30 ಕ್ಕೆ ಗಂಗೆಪೂಜೆ ನೆರವೇರುವುದು ಎಂದು ಕನ್ವೀನರ್‌ ಎನ್.ಎಂ. ಆಂಜನೇಯ ಗುರೂಜಿ ತಿಳಿಸಿದ್ದಾರೆ.

error: Content is protected !!