ಉನ್ನತ ಅಧಿಕಾರಿಗಳಿಬ್ಬರ ವಜಾಕ್ಕೆ ಒತ್ತಾಯ

ಉನ್ನತ ಅಧಿಕಾರಿಗಳಿಬ್ಬರ ವಜಾಕ್ಕೆ ಒತ್ತಾಯ - Janathavaniದಾವಣಗೆರೆ, ಫೆ. 20- ಅನಾಗರಿಕರಂತೆ ಸಾಮಾಜಿಕ ಜಾಲತಾಣದಲ್ಲಿ ಕುಟುಕುವ ಮೂಲಕ ಬೀದಿ ರಂಪಕ್ಕೆ ಕಾರಣರಾಗುತ್ತಿರುವ ಉನ್ನತ ಹುದ್ದೆಯಲ್ಲಿರುವ ಐಪಿಎಸ್ ಅಧಿಕಾರಿಗಳಿಬ್ಬರನ್ನೂ ಕೂಡಲೇ ಸೇವೆಯಿಂದ ವಜಾಗೊಳಿಸುವಂತೆ ಕಾಂಗ್ರೆಸ್ ಮುಖಂಡ ಎಂ.ಟಿ. ಸುಭಾಷ್ ಚಂದ್ರ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇವರಿಬ್ಬರ ಬೀದಿ ಜಗಳ ಸಾರ್ವಜನಿಕರಿಗೆ ಮನರಂಜನೆಯಾಗಿದೆ. ಇವರಿಬ್ಬರ ಸಾಮಾಜಿಕ ಜಾಲತಾಣದ ಜಗಳ ನೋಡಿಯೂ ಮೌನವಹಿಸಿರುವ ಸರ್ಕಾರ ನಿಷ್ಕ್ರಿಯೆವಾಗಿದೆ ಎಂದು ತೋರಿಸಿಕೊಟ್ಟಿದೆ. ಈ ಪ್ರಕರಣದ ಬಗ್ಗೆ ಯಾವ ರೀತಿ ಕ್ರಮ
ಕೈಗೊಂಡಿದೆ ಎಂಬುದು ಇನ್ನೂ
ನಿರ್ಧಾರವಾಗಿಲ್ಲ. ಪ್ರಮುಖ ಹುದ್ದೆಯಲ್ಲಿರುವ ಈ ಇಬ್ಬರೂ ಅಧಿಕಾರಿಗಳ ವರ್ತನೆ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಸಾರ್ವಜನಿಕರಿಗೆ ಇವರ ನಡವಳಿಕೆ ಮತ್ತು ಸರ್ಕಾರದ ಅಸಹಾಯಕತೆ ನಗೆಗಡಲಿಗೆ ಕಾರಣವಾಗಿದೆ ಎಂದಿದ್ದಾರೆ.

ಕೂಡಲೇ ಈ ಇಬ್ಬರೂ ಅಧಿಕಾರಿಗಳನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಇವರ ಸೇವೆಯನ್ನು ಕೇಂದ್ರಕ್ಕೆ ರವಾನಿಸಬೇಕು. ಕೇಂದ್ರದ ಗೃಹಮಂತ್ರಿ ಅಮಿತ್ ಷಾ ಅವರ ಅಧೀನದಲ್ಲಿ ಕರ್ತವ್ಯ ನಿರ್ವಹಿಸಿದರೆ ಅವರಿಂದ ಕೆಲವು ನೀತಿ ಸಂಹಿತೆಗಳನ್ನಾದರೂ ಕಲಿಯಬಹುದು ಎಂದು ತಿಳಿಸಿದ್ದಾರೆ.

ಇದೂ ಸಾಧ್ಯವಾಗದಿದ್ದರೆ ಕೂಡಲೇ ಸೇವೆಯಿಂದ ವಜಾಗೊಳಿಸುವಂತೆ ಸುಭಾಶ್ಚಂದ್ರ ಆಗ್ರಹಿಸಿದ್ದಾರೆ.

error: Content is protected !!