ವಿದ್ಯಾರ್ಥಿಗಳು ಸೆಲೆಬ್ರಿಟಿಗಳ ಜೀವನ ಶೈಲಿ ಅನುಕರಣೆ ಮಾಡುತ್ತಿರುವುದು ವಿಷಾದನೀಯ

ವಿದ್ಯಾರ್ಥಿಗಳು ಸೆಲೆಬ್ರಿಟಿಗಳ ಜೀವನ ಶೈಲಿ ಅನುಕರಣೆ ಮಾಡುತ್ತಿರುವುದು ವಿಷಾದನೀಯ

ತುರ್ಚಘಟ್ಟದ ಗುರುಕುಲದ ವಾರ್ಷಿಕೋತ್ಸವದಲ್ಲಿ ನ್ಯಾಯಾಧೀಶರಾದ ವಿಜಯಾನಂದ

ದಾವಣಗೆರೆ, ಫೆ. 20-  ಇಂದಿನ ವಿದ್ಯಾರ್ಥಿಗಳು ಸೆಲೆಬ್ರಿಟಿಗಳನ್ನು ತಮ್ಮ ಆದರ್ಶ ವ್ಯಕ್ತಿಗಳನ್ನಾಗಿ ಮಾಡಿಕೊಂಡು ಅವರ ಜೀವನ ಶೈಲಿಯನ್ನು ಅನುಕರಣೆ ಮಾಡುತ್ತಿರುವುದು ವಿಷಾದನೀಯ ಎಂದು ನ್ಯಾಯಾಧೀಶರಾದ ವಿಜಯಾನಂದ ತಿಳಿಸಿದರು. 

ಸಮೀಪದ ತುರ್ಚಘಟ್ಟದ ಶ್ರೀ ಗುರುಕುಲ ಸಿಬಿಎಸ್‌ಇ ವಸತಿಯುತ ಶಾಲೆಯಲ್ಲಿ ನಡೆದ 14 ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ  ಉಪಸ್ಥಿತರಿದ್ದು ಮಾತನಾಡಿದರು.

ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅವರಿಗೆ ಕೃಷಿ ಕ್ಷೇತ್ರಕ್ಕೆ ಸಲ್ಲಿಸಿರುವ  ಸೇವೆ ಪರಿಗಣಿಸಿ, ಶ್ರೀ ಗುರುಕುಲ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿದ್ಯಾಸಂಸ್ಥೆ ಕಾರ್ಯದರ್ಶಿ ಶ್ರೀಮತಿ  ಭವ್ಯ ಮೇಘರಾಜ್ ಅಧ್ಯಕ್ಷತೆ ವಹಿಸಿದ್ದರು. ಚನ್ನಗಿರಿ ಪಿಎಸ್ಐ ಮೇಘರಾಜ್ ಹಾಗೂ ಪ್ರಾಂಶುಪಾಲ ಜಿ. ಬಸವರಾಜ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

error: Content is protected !!