ಹರಿಹರದಲ್ಲಿ ಶಿವಾಜಿ ಜಯಂತಿ : ಬೈಕ್ ರ್‍ಯಾಲಿ

ಹರಿಹರದಲ್ಲಿ ಶಿವಾಜಿ ಜಯಂತಿ : ಬೈಕ್ ರ್‍ಯಾಲಿ

ಹರಿಹರ, ಫೆ. 19- ನಗರದ ಹಿಂದೂ ಜಾಗರಣೆ ವೇದಿಕೆ, ಮರಾಠ ಸಮಾಜ, ಬಿಜೆಪಿ ಪಕ್ಷದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಶಿವಾಜಿ ಮಹಾರಾಜರ ಭಾವಚಿತ್ರದ ಬೃಹತ್ ಬೈಕ್ ರ್‍ಯಾಲಿ ಮಾಡಲಾಯಿತು.

ಬೈಕ್ ರಾಲಿ ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡು ರಾಜಬೀದಿಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಅರ್ಜುನ್ ಬಿ.ಪಿ. ಹರೀಶ್, ನಗರ ಘಟಕದ ಬಿಜೆಪಿ ಅಧ್ಯಕ್ಷ ಅಜಿತ್ ಸಾವಂತ್, ಪ್ರಧಾನ ಕಾರ್ಯದರ್ಶಿ ತುಳಜಪ್ಪ ಭೂತೆ, ದೂಡಾ ಸದಸ್ಯ ಬಾತಿ ಚಂದ್ರಶೇಖರ್, ದೂಡಾ ಮಾಜಿ ಸದಸ್ಯ ರಾಜು ರೋಖಡೆ, ರವಿ ರಾಯ್ಕರ್, ದಿನೇಶ್, ಚಂದನ್ ಮೂರ್ಕಲ್, ಭಾರತ್ ಶೆಟ್ಟಿ, ರಾಜು ಕಿರೋಜಿ ಮತ್ತಿತರರು ಹಾಜರಿದ್ದರು.

error: Content is protected !!