ಶಾಸಕ ಎಸ್‌ಎಆರ್ ಆರೋಗ್ಯ ಸುಧಾರಣೆಗೆ ಶೋಷಿತ ವರ್ಗಗಳ ಒಕ್ಕೂಟದ ಪ್ರಾರ್ಥನೆ

ಶಾಸಕ ಎಸ್‌ಎಆರ್ ಆರೋಗ್ಯ ಸುಧಾರಣೆಗೆ ಶೋಷಿತ ವರ್ಗಗಳ ಒಕ್ಕೂಟದ ಪ್ರಾರ್ಥನೆ

ದಾವಣಗೆರೆ, ಫೆ.19 –  ಮಂಡಿ ಶಸ್ತ್ರಚಿಕಿತ್ಸೆಗೊಳ ಗಾಗಿರುವ ಶಾಸಕ ಎಸ್. ಎ. ರವೀಂದ್ರನಾಥ್ ಅವರ ಆರೋಗ್ಯ ಸುಧಾರಣೆಯಾಗಲಿ ಎಂದು ಶೋಷಿತ ವರ್ಗಗಳ ಒಕ್ಕೂಟ ಭಗವಂತನಲ್ಲಿ ಪ್ರಾರ್ಥಿಸಿದೆ.

ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜು ಸೇರಿದಂತೆ, ಹಲವರು  ರವೀಂದ್ರನಾಥ್ ಅವರನ್ನು ಭೇಟಿ ಮಾಡಿ, ಆರೋಗ್ಯ ಸುಧಾರಣೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದಲೂ
ಜನರ ಪ್ರೀತಿಯಿಂದಲೇ ಗೆದ್ದು ಶಾಸಕ, ಮಂತ್ರಿಗಳಾದರೂ ಅಧಿಕಾರದ ದರ್ಪ
ತೋರದೆ ಹಳ್ಳಿಯ ರೈತ ಮಗನಾಗಿ ಕೆಲಸ ಮಾಡುತ್ತಿರುವ ರವೀಂದ್ರನಾಥ ಅವರು ಹಿರಿಯರಿರಲಿ, ಕಿರಿಯರೇ ಬರಲಿ ತಮ್ಮ ಜವಾರಿ
ಭಾಷೆಯಿಂದಲೇ ಮಾತನಾಡಿಸುತ್ತಾ ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು. ರವೀಂದ್ರನಾಥ ಅವರು ಈ ಬಾರಿ ಮತ್ತೊಮ್ಮೆ ಶಾಸಕರಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಕೊರಚ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಜಿ. ಕೃಷ್ಣಪ್ಪ, ಅಂಗವಿಕಲರ ಸಂಘದ ಜಿಲ್ಲಾಧ್ಯಕ್ಷ ಧನಂಜಯಕುಮಾರ್, ಉತ್ತರ ಬಿಜೆಪಿ ಅಧ್ಯಕ್ಷ ಬೇತೂರು ಸಂಗನಗೌಡ, ನಗರ ಪಾಲಿಕೆ ಮಾಜಿ ಸದಸ್ಯ ಹೆಚ್.ಎನ್.ಶಿವಕುಮಾರ್, ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಹನುಮೇಗೌಡ, ನಾಗರಾಜ್, ಗಣೇಶ್ ಮತ್ತಿತರರಿದ್ದರು.

error: Content is protected !!