ಕಾಶಿ ಹಿಂದೂ ವಿವಿಯಲ್ಲಿ ತರಳಬಾಳು ಶ್ರೀ ಉಪನ್ಯಾಸ

ಕಾಶಿ ಹಿಂದೂ ವಿವಿಯಲ್ಲಿ ತರಳಬಾಳು ಶ್ರೀ ಉಪನ್ಯಾಸ - Janathavaniದಾವಣಗೆರೆ, ಫೆ. 15 – ವಾರಣಾಸಿಯ ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಫೆ.17ರ ಶುಕ್ರವಾರ ದಂದು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕ ರಾಜಪೋಪಟ್ ಅವರು ಪಾಣಿನಿಯ ಸೂತ್ರಗಳಿಗೆ ಸಂಬಂಧಿಸಿದಂತೆ ಸೃಷ್ಟಿಸಿರುವ ವಿವಾದದ ಹಿನ್ನೆಲೆಯಲ್ಲಿ ಈ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿದೆ. ಉಪನ್ಯಾಸದಲ್ಲಿ ಸಂಸ್ಕೃತ ಭಾಷೆ ಹಾಗೂ ವ್ಯಾಕರಣ ತಜ್ಞರು, ಕಂಪ್ಯೂಟರ್ ಸೈನ್ಸ್ ಹಾಗೂ ಗಣಿತದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

error: Content is protected !!