ಆಹಾರ ಕಾಯ್ದೆಯಡಿ ಪಡಿತರ ವಿತರಣೆ

ದಾವಣಗೆರೆ, ಫೆ. 15- ಕೇಂದ್ರ ಸರ್ಕಾರವು ರಾಷ್ಟೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸುವುದರೊಂದಿಗೆ ರಾಜ್ಯ ಸರ್ಕಾರದ ವೆಚ್ಚದಲ್ಲಿ 1 ಕೆ.ಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸಲಾಗುತ್ತಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಅಂತ್ಯೋದಯ ಪ್ರತಿ ಕಾರ್ಡುದಾರರಿಗೆ 35 ಕೆ.ಜಿ ಅಕ್ಕಿ ಹಾಗೂ ಬಿ.ಪಿ.ಎಲ್ ಕಾರ್ಡುದಾರರಿಗೆ ತಲಾ 7 ಕೆ.ಜಿ ಅಕ್ಕಿ  ಮತ್ತು ಒಪ್ಪಿಗೆ ನೀಡಿದ ಏಕಸದಸ್ಯ ಎ.ಪಿ.ಎಲ್ ಪಡಿತರ ಚೀಟಿದಾರರಿಗೆ 15ರೂ. ಗಳಂತೆ 10 ಕೆ.ಜಿಯವರೆಗೆ ಪಡಿತರ ನೀಡಲಾಗುತ್ತದೆ.ಪಡಿತರ ಚೀಟಿದಾರರು ಅಂತರ್ ರಾಜ್ಯ/ಜಿಲ್ಲೆಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡಿತರ ಪಡೆಯಲು ಅವಕಾಶ ಕಲ್ಪಿಸಿದ್ದು,  ಪಡಿತರ ಚೀಟಿದಾರರು ನ್ಯಾಯ ಬೆಲೆ ಅಂಗಡಿಗಳಲ್ಲಿ ವಿಳಾಸ ನೀಡಿದ ತಕ್ಷಣ ರಶೀದಿ ಪಡೆದು ಅದರಂತೆ ಆಹಾರ ಧಾನ್ಯಗಳನ್ನು ಪಡೆಯಬೇಕು ಎಂದು  ತಹಶೀಲ್ದಾರ್ ತಿಳಿಸಿದ್ದಾರೆ.

error: Content is protected !!