ದಾವಣಗೆರೆ, ಫೆ.15- ನನ್ನನ್ನು ಅಪಹರಿಸಿ ಹಣ ಕಸಿದುಕೊಂಡಿದ್ದಾರೆಂದು ಸುಳ್ಳು ದೂರು ನೀಡಿದ್ದ ಯುವಕ ನಂತರ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.
ಎಸ್.ಎಸ್.ಎಂ. ನಗರದ ಅಮಿರ್ ಖಾನ್ ಕಳೆದ ಜ.30 ರಂದು ಆಜಾದ್ ನಗರ ಠಾಣೆಗೆ ಬಂದು ಯಾರೋ ಮೂರು ಜನ ನನಗೆ ಚಾಕು ತೋರಿಸಿ ಅಪಹರಿಸಿ, ಮೊಬೈಲ್ ಕಿತ್ತುಕೊಂಡು ಫೋನ್ ಪೇ ಮೂಲಕ 35 ಸಾವಿರ ರೂ. ಹಣವನ್ನು ಖಾತೆಗೆ ಕಳುಹಿಸಿಕೊಂಡಿದ್ದಾರೆ ಎಂದು ದೂರು ನೀಡಿದ್ದ.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ವಿಚಾರಣೆ ನಡೆಸಿದಾಗ, ಅಮಿರ್ ತನ್ನ ಖಾತೆಯಲ್ಲಿದ್ದ ಹಣವನ್ನು ಮೊಬೈಲ್ ಆನ್ ಲೈನ್ ಗೇಮ್ಗೆ ಬಳಸಿ ಸೋತು, ತಂದೆ ಬಯ್ಯುತ್ತಾರೆಂದು ತಿಳಿದು ಸುಳ್ಳು ದೂರು ಕೊಟ್ಟಿರುವುದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ದುರುಪ ಯೋಗ ಪಡಿಸಿಕೊಂಡ ಅಮಿರ್ ಖಾನ್ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೂರು ನೀಡಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.