ಸೇಂಟ್‍ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯಗಳ ದಿನಾಚರಣೆ

ಸೇಂಟ್‍ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯಗಳ ದಿನಾಚರಣೆ

ದಾವಣಗೆರೆ, ಫೆ. 12- ನಗರದ ಸೇಂಟ್‍ಜಾನ್ಸ್ ವಿದ್ಯಾಸಂಸ್ಥೆಯ ನರ್ಸರಿ ವಿಭಾಗದ ಮಕ್ಕಳಿಂದ ಅಂತರರಾಷ್ಟ್ರೀಯ ಸಿರಿಧಾನ್ಯಗಳ ದಿನ ಆಚರಿಸಲಾಯಿತು.

ವಿದ್ಯಾಸಂಸ್ಥೆಯ ಪ್ರಾಂಶುಪಾಲ ಆರ್.  ಸಯ್ಯದ್ ಆರಿಫ್, ಶ್ರೀಮತಿ ಪ್ರೀತಾ ಟಿ. ರೈ, ಶ್ರೀಮತಿ ಜ್ಯೋತಿ ಎನ್. ಉಪಾಧ್ಯಾಯ ಅವರು ಮೊಳಕೆ ಕಾಳುಗಳನ್ನು ಮಕ್ಕಳಿಗೆ ತಿನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ವಿದ್ಯಾರ್ಥಿಗಳು ವಿವಿಧ ಧಾನ್ಯಗಳನ್ನು ತಂದು, ತಮ್ಮ ತೊದಲು ನುಡಿಯ ಮೂಲಕ ಧಾನ್ಯಗಳಲ್ಲಿರುವ ಸಮಗ್ರ ಪೌಷ್ಟಿಕಾಂಶ, ಆರೋಗ್ಯ ರಕ್ಷಣೆಗೆ ಅವಶ್ಯಕವಾದ ಧಾನ್ಯಗಳ ಬಗ್ಗೆ ತಿಳಿಸಿದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಅನಿಲ್ ಕುಮಾರ್‍, ಕಾರ್ಯದರ್ಶಿ ಉಮಾಪತಯ್ಯ ಹಾಗೂ ಖಜಾಂಚಿ ಪ್ರವೀಣ್ ಹುಲ್ಲುಮನೆ ಉಪಸ್ಥಿತರಿದ್ದರು. 

error: Content is protected !!