ಕಾಂಗ್ರೆಸ್‌ನಿಂದ ವೈ.ರಾಮಪ್ಪ ಉಚ್ಛಾಟನೆ ಆದೇಶಕ್ಕೆ ತಡೆ

ಕಾಂಗ್ರೆಸ್‌ನಿಂದ ವೈ.ರಾಮಪ್ಪ ಉಚ್ಛಾಟನೆ ಆದೇಶಕ್ಕೆ ತಡೆ - Janathavaniದಾವಣಗೆರೆ, ಫೆ.6- ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿದ ಆದೇಶವನ್ನು ತಡೆ ಹಿಡಿಯಲಾಗಿದೆ.

ಪತ್ರಿಕಾ ಪ್ರಕಟಣೆ ಮೂಲಕ ಈ ಬಗ್ಗೆ ಸ್ಪಷ್ಟಪಡಿಸಿರುವ ವೈ.ರಾಮಪ್ಪ, ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯ ಅಧ್ಯಕ್ಷ ಕೆ.ರೆಹಮಾನ್ ಖಾನ್ ಅವರು ತಡೆಹಿಡಿದಿರುವ ಆದೇಶ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಯಥಾತ್ತಾಗಿ ಮುಂದುವರೆಯುವಂತೆ ಸೂಚಿಸಲಾಗಿದೆ ಎಂದಿದ್ದಾರೆ. 

error: Content is protected !!