ಹರಪನಹಳ್ಳಿ ಬರಹಗಾರರ ಸಂಘದ ಅಧ್ಯಕ್ಷರಾಗಿ ಕೆ.ಬಸವರಾಜ ಆಯ್ಕೆ

ಹರಪನಹಳ್ಳಿ ಬರಹಗಾರರ ಸಂಘದ ಅಧ್ಯಕ್ಷರಾಗಿ ಕೆ.ಬಸವರಾಜ ಆಯ್ಕೆ

ಹರಪನಹಳ್ಳಿ, ಜ. 30- ತಾಲ್ಲೂಕು ಬರಹಗಾರರ ಸಂಘದ ಅಧ್ಯಕ್ಷರಾಗಿ ಕೆ.ಬಸವರಾಜ  ಆಯ್ಕೆ ಯಾಗಿದ್ದಾರೆ  ಎಂದು ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷರಾದ  ಮತ್ತಿಹಳ್ಳಿ ಜಯಮ್ಮ ತಿಳಿಸಿದ್ದಾರೆ.

ಪಟ್ಟಣದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಜರುಗಿದ ಸಭೆಯಲ್ಲಿ ತಾಲ್ಲೂಕು ಬರಹಗಾರರ ಸಂಘದ ಪಧಾದಿಕಾರಿಗಳನ್ನು  ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಬಸವನಗೌಡ ಪಾಟೀಲ್, ಉಪಾಧ್ಯಕ್ಷರಾಗಿ ಮೂರ್ತಿ ಎಲ್., ಅರುಣ್ ಕುಮಾರ್ ಎಚ್, ಕಾರ್ಯದರ್ಶಿ ಮಂಜುನಾಥ ಎಚ್.ಕೆ. ಸಹಕಾರ್ಯದರ್ಶಿ ಉದಯಕುಮಾರ್, ಖಜಾಂಚಿ ಪಿ.ವೆಂಕಟೇಶ, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಕುಮಾರ್.ಟಿ., ಮಹಿಳಾ ಪ್ರತಿನಿಧಿ ಶಾಂತ. ಕಾರ್ಯಕಾರಿ ಮಂಡಳಿ ಸದಸ್ಯರಾಗಿ  ಬಂಡ್ರಿ ಕೆ. ಆನಂದ, ಬಸವರಾಜ ಕೋಡಿಹಳ್ಳಿ, ಕೊಟ್ರೇಶ ಕೆ. ಬೆನಕನಾಯ್ಕ ಲಂಬಾಣಿ  ಆಯ್ಕೆಯಾಗಿದ್ದಾರೆ.

ಈ ವೇಳೆ ಜಿಲ್ಲಾ ಬರಹಗಾರರ ಸಂಘದ ಕಾರ್ಯದರ್ಶಿ ಕೊಟ್ರೇಶನಾಯ್ಕ,  ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ನ್ಯಾಯವಾದಿಗಳಾದ ಕೆ. ಕೊಟ್ರೇಶ, ಶಾಂತಪ್ಪ ಉಪಸ್ಥಿತರಿದ್ದರು.

error: Content is protected !!