ದಾವಣಗೆರೆ,ಜ.27- ನಗರದ ನಾಗನೂರು ರಸ್ತೆಯಲ್ಲಿರುವ ಯುರೋ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾರತದ ವಿವಿಧ ರಾಜ್ಯಗಳ ವೇಷ – ಭೂಷಣಗಳೊಂದಿಗೆ ಆ ರಾಜ್ಯದ ಭಾಷೆ, ಪ್ರೇಕ್ಷಣೀಯ ಸ್ಥಳಗಳು, ವಿಶೇಷ ತಿಂಡಿ – ತಿನಿಸುಗಳು ಇವುಗಳ ಬಗ್ಗೆ ವಿದ್ಯಾರ್ಥಿಗಳು ಸಂಕ್ಷಿಪ್ತವಾಗಿ ಹೇಳುವುದರ ಮೂಲಕ ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಎಂಬುದನ್ನು ತೋರಿಸುವುದರ ಮೂಲಕ ಎಲ್ಲರ ಗಮನ ಸೆಳೆದರು.
ವಿವಿಧತೆಯಲ್ಲಿ ಏಕತೆ ಪ್ರದರ್ಶಿಸಿದ ಯುರೋ ಶಾಲೆ ಮಕ್ಕಳು
![10 uro 28.01.2023 ವಿವಿಧತೆಯಲ್ಲಿ ಏಕತೆ ಪ್ರದರ್ಶಿಸಿದ ಯುರೋ ಶಾಲೆ ಮಕ್ಕಳು](https://janathavani.com/wp-content/uploads/2023/01/10-uro-28.01.2023-860x393.jpg)