27ರಂದು `ಶ್ರೀ ಹಿಮಗಿರಿ ಭವನ’ದ ಉದ್ಘಾಟನೆ

27ರಂದು `ಶ್ರೀ ಹಿಮಗಿರಿ ಭವನ'ದ ಉದ್ಘಾಟನೆ - Janathavaniದಾವಣಗೆರೆ, ಜ. 23- ಹರಿಹರ ತಾ. ಶಿವನಹಳ್ಳಿ (ಷಂಶೀಪುರ) ಗ್ರಾಮದ ಬಳಿಯ ವೈರಾಗ್ಯಧಾಮದಲ್ಲಿ ಇದೇ  ದಿನಾಂಕ 27ರ ಶುಕ್ರ ವಾರ `ಶ್ರೀ ಹಿಮಗಿರಿ ಭವನ’ ನೂತನ ಕಟ್ಟಡದ ಉದ್ಘಾ ಟನೆ, ಅಡ್ಡಪಲ್ಲಕ್ಕಿ ಮಹೋ ತ್ಸವ ಹಾಗೂ ಸನಾತನ ಧರ್ಮ ಜಾಗೃತಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ನಗರದ ಶ್ರೀ ಸೋಮೇಶ್ವರ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶ್ರೀಗಳು, ಅಂದು ಬೆಳಿಗ್ಗೆ 8 ಗಂಟೆಯಿಂದ ಧರ್ಮ ಕಂಕಣ ಧಾರಣೆ, 8.48ರಿಂದ ಶ್ರೀಮದ್ರಂಭಾಪುರಿ ಹಾಗೂ ಶ್ರೀಮತ್ಕೇ ದಾರ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಬೆಳಿಗ್ಗೆ 11 ಗಂಟೆಯಿಂದ ಧರ್ಮಸಭೆ ನಡೆಯಲಿದೆ ಎಂದು ಹೇಳಿದರು.

ಕೇದಾರ ಶ್ರೀಗಳು ಕರ್ನಾಟಕಕ್ಕೆ ಆಗಮಿಸಿದಾಗ ಅವರು ತಂಗಲು ಸೂಕ್ತ ವ್ಯವಸ್ಥೆ ಇರಲಿಲ್ಲ. ಆ ಕಾರಣ ಮಧ್ಯ ಕರ್ನಾಟಕದ ತವರೂರಿನಂತಿರುವ ದಾವಣಗೆರೆಯನ್ನು ಆಯ್ಕೆ ಮಾಡಿಕೊಂಡ ಹಿಮಗಿರಿ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ.

ಕೇದಾರದ ಶ್ರೀ ಕೇದಾರೇಶ್ವರ ಸ್ವಾಮಿಯ ಪೂಜೆ ಹಾಗೂ ದರ್ಶನ ವರ್ಷ ದಲ್ಲಿ ಕೇವಲ 6 ತಿಂಗಳು ಮಾತ್ರ ಲಭ್ಯವಿರುತ್ತದೆ. ಉಳಿದ ತಿಂಗಳಲ್ಲಿಯೂ ದರ್ಶನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಭಕ್ತರಿಗೆ ಇಲ್ಲಿಯೇ ಕೇದಾರೇಶ್ವರನ ದರ್ಶನ ಭಾಗ್ಯ ಕಲ್ಪಿಸಲು ಭಕ್ತರು ಪ್ರಾರ್ಥಿಸಿದ ಹಿನ್ನೆಲೆಯಲ್ಲಿ, ಹಿಮಾಲಯದ ಕೇದಾರ ಉತ್ತರ ಕೇದಾರವಾದರೆ, ದಾವಣಗೆರೆ ಬಳಿ ದಕ್ಷಿಣ ಕೇದಾರ ಮಾಡುವ ಉದ್ದೇಶ ಕೇದಾರ ಶ್ರೀಗಳದ್ದಾಗಿದೆ. ಹಿಮಾಲಯದಲ್ಲಿ ರುವಂತೆಯೇ ಶಿಲೆಯಿಂದ ಶಿಲಾ ಮಂಟಪ, ಗುರುಭವನ, ಭಕ್ತಿ ನಿವಾಸ, ಪ್ರಸಾದ ನಿಲ ಯಗಳನ್ನು ನಿರ್ಮಿಸುವ ಉದ್ದೇಶ ಹೊಂದ ಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆ ಸಂಸ್ಥಾಪಕ ಕೆ.ಎಂ. ಸುರೇಶ್, ಮಹಾನಗರ ಪಾಲಿಕೆ ಸದಸ್ಯ ಕೆ.ಎಂ.  ವೀರೇಶ್, ಶಿವಯೋಗಿ ಸ್ವಾಮಿ ಕಂಬಾಳಿಮಠ, ಅಜ್ಜಂಪುರ ಶೆಟ್ರು ಮೃತ್ಯುಂಜಯ, ನಾಗಭೂಷಣ್, ರಾಜಶೇಖರ್  ಉಪಸ್ಥಿತರಿದ್ದರು.

error: Content is protected !!